ಬೆಂಗಳೂರು: ಶಾಸಕರ ರಾಜೀನಾಮೆಯನ್ನ ನಾನು ಅಂಗೀಕರಿಸುವುದಿಲ್ಲ ಅಂತಾ ಸ್ಪೀಕರ್ ರಮೇಶಕುಮಾರ ಹೇಳಿದ್ದಾರೆ. ಖುದ್ದು ಹಾಜರಾಗದಿದ್ರೆ ಶಾಸಕರ ರಾಜೀನಾಮೆ ಅಂಗೀಕರಿಸುವುದಿಲ್ಲ ಅಂತಾ, ವಿಧಾನಸೌಧದಲ್ಲಿ ಹೇಳಿದ್ದಾರೆ.
ಶಾಸಕರ ರಾಜೀನಾಮೆ ಪರಿಶೀಲನೆ ನಡೆಸಿದ ನಂತ್ರ ಮಾತ್ನಾಡಿದ ಅವರು, ರಾಜೀನಾಮೆ ಕೊಡುವ ಮೊದ್ಲು ಯಾರೂ ಅನುಮತಿ ಪಡೆದಿಲ್ಲ. ಅವರು ಕಚೇರಿಗೆ ಬರುವ ವಿಷಯವೇ ನನಗೆ ತಿಳಿದಿಲ್ಲ. ಹೀಗಾಗಿ ಕಚೇರಿ ಕೆಲಸದ ನಿಮಿತ್ತ ಹೊರಗೆ ಇದ್ದೆ. ನನ್ನ ಅನುಪಸ್ಥಿತಿಯಲ್ಲಿ ರಾಜೀನಾಮೆ ಸಲ್ಲಿಸಿದ್ರೆ ನಾನು ಹೊಣೆಯಲ್ಲ ಅಂತಾ ತಿಳಿಸಿದ್ದಾರೆ.
ರಾಜೀನಾಮೆ ನೀಡಿದ ಶಾಸಕರನ್ನ ವೈಯಕ್ತಿಕವಾಗಿ ಭೇಟಿಯಾದ್ಮೇಲೆಯೇ ರಾಜೀನಾಮೆ ಅಂಗೀಕರಸಲಾಗುವುದು ಅಂತಾ ಸಭಾಧ್ಯಕ್ಷ ರಮೇಶಕುಮಾರ ತಿಳಿಸಿದ್ದಾರೆ.