ಗುಜರಾತ್ ಸೇತುವೆ ದುರಂತ: ಯಾತ್ರೆ ಮುಂದೂಡಿದ ಕಾಂಗ್ರೆಸ್

173

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಗುಜರಾತಿನ ಮೊರ್ಬಿ ಸೇತುವೆ ಕುಸಿತದಿಂದಾಗಿ 132 ಜನರು ಪ್ರಾಣ ಕಳೆದುಕೊಂಡಿದ್ದು, ಇದೊಂದು ದೇಶದ ದೊಡ್ಡ ದುರಂತಗಳಲ್ಲಿ ಒಂದು ಎನ್ನಬಹುದು. ಈ ಕಾರಣಕ್ಕೆ ಕಾಂಗ್ರೆಸ್ ತನ್ನ ಸಂಕಲ್ಪ ಯಾತ್ರೆಯನ್ನು ಮಂಗಳವಾರಕ್ಕೆ ಮುಂದೂಡಿದೆ.

ಗುಜರಾತ್ ಪರಿವರ್ತನ ಸಂಕಲ್ಪ ಯಾತ್ರೆಯನ್ನು ಕಾಂಗ್ರೆಸ್ ಹಮ್ಮಿಕೊಂಡಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಾಗೂ ಮಾಜಿ ಕೇಂದ್ರ ಸಚಿವ ಸರ್ದಾರ್ ವಲ್ಲಾಬಾಯ್ ಪಟೇಲ್ ಪುಣ್ಯತಿಥಿ ಸ್ಮರಣಾರ್ಥ, ಅಕ್ಟೋಬರ್ 31ರಂದು ಸೋಮನಾಥ್, ಭುಜ್, ಫಗ್ವೆಲ್ ಹಾಗೂ ಜಂಬೂಸಾರನಿಂದ ಯಾತ್ರೆ ನಡೆಸಲು ಸಿದ್ಧತೆಯಾಗಿತ್ತು. ಸೇತುವೆ ದುರಂತದಿಂದಾಗಿ ಯಾತ್ರೆ ಮಂಗಳವಾರಕ್ಕೆ ಮುಂದೂಡಲಾಗಿದೆ.

145 ಸಾರ್ವಜನಿಕ ಸಭೆ, 95 ಮೆರವಣಿಗಳು, 5,432 ಕಿಲೋ ಮೀಟರ್ ಯಾತ್ರೆ ಸಾಗಲಿದೆ. 45 ಲಕ್ಷ ಜನರೊಂದಿಗೆ ನೇರ ಸಂಪರ್ಕ ಸಾಧಿಸುವ ಗುರಿ ಇದಾಗಿದೆ. ಯಾತ್ರೆಯಲ್ಲಿ 10 ಲಕ್ಷ ಜನರು ಸೇರುವ ನಿರೀಕ್ಷೆಯಿದೆ ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಜಗದೀಶ್ ಠಾಕೂರ್ ಹೇಳಿದ್ದಾರೆ. ಡಿಸೆಂಬರ್ ನಲ್ಲಿ ಗುಜರಾತ್ ನಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ.




Leave a Reply

Your email address will not be published. Required fields are marked *

error: Content is protected !!