ಪ್ರಜಾಸ್ತ್ರ ಸಿನಿಮಾ ಡೆಸ್ಕ್
ನಿರ್ದೇಶಕ ಗುರುಪ್ರಸಾದ್ ಸುಮಾರು ವರ್ಷಗಳ ಬಳಿಕ ರಂಗನಾಯಕ ಅನ್ನೋ ಸಿನಿಮಾ ಮಾಡಿದ್ದಾರೆ. ನಟ ಜಗ್ಗೇಶ್ ನಟನೆಯ ಚಿತ್ರವಾಗಿದ್ದು ಹಾಡೊಂದು ಬಿಡುಗಡೆ ಮಾಡಿದ್ದಾರೆ. ಈ ಹಾಡಿನ ಮಧ್ಯ ಶ್ರುತಿ.. ಬಿಗ್ ಬಾಸ್ ಶ್ರುತಿ, ಮೀಟು ಶ್ರುತಿ ಎನ್ನುವ ಸಾಲುಗಳು ಬರುತ್ತವೆ. ಅದು ನಟಿ ಶ್ರುತಿ ಹರಿಹರನ್ ಅವರನ್ನುದ್ದೇಶಿಸಿಯೇ ಮಾಡಲಾಗಿದೆ ಎಂದು ಸ್ವತಃ ನಿರ್ದೇಶಕರೆ ಹೇಳ್ತಿದ್ದಾರೆ.
ಹಾಡಿನ ಸಾಲು ವೈರಲ್ ಆಗ್ತಿದ್ದಂತೆ ಈ ಬಗ್ಗೆ ಮಾಧ್ಯಮದವರು ಕೇಳಿದಾಗ ಒಂದೊಂದು ಕಡೆ ಒಂದೊಂದು ರೀತಿ ನಿರ್ದೇಶಕ ಗುರುಪ್ರಸಾದ್ ಹೇಳಿದ್ದಾರೆ. ನಟ ಶರಣ್ ಸಹೋದರಿ ಶ್ರುತಿ ಅವರನ್ನು ಬಿಗ್ ಬಾಸ್ ಶ್ರುತಿ ಅಂತಾರೆ. ನನಗೆ ತುಂಬಾ ಆತ್ಮೀಯರು. ಒಳ್ಳೆಯ ಕಲಾವಿದರು ಅಂತಾನೆ, ಚಿತ್ರದಲ್ಲಿ ಜಗ್ಗೇಶ್ ಕತ್ತೆ ಮೇಯಿಸುವವನು. ಇವರು ಹಾಡುವಾಗ ಕತ್ತೆನೂ ಹಾಡುತ್ತೆ. ಅದು ಶ್ರುತಿ ಬಿಟ್ಟು ಹಾಡುತ್ತೆ. ಸಂಗೀತದ ಪ್ರಕಾರ ಶ್ರುತಿ ಅಂತಾರೆ. ಶ್ರುತಿ ಹರಿಹರನ್ ಬಗ್ಗೆ ಹೇಳಲೇಬೇಕು ನಾನು. ಆಕೆ ಮೂಲ ಕನ್ನಡ ಅಲ್ಲ. ಎಲ್ಲಿಂದಲೋ ಬಂದು ಕನ್ನಡ ಚಿತ್ರರಂಗದಲ್ಲಿ ರಾಡಿ ಎಬ್ಬಿಸಿ, ಗಲಾಟೆಯಲ್ಲಿ ನಾನು ನಿಂತುಕೊಂಡೆ. ಎಷ್ಟು ವರ್ಷ ಮಾಡ್ತೀರ ಬಿಟ್ಟು ಬಿಡಿ. ಯಾವ ಕಾರಣಕ್ಕೆ ಆ ಹುಡುಗಿ ಬಂದು ಮಾಡಿದ್ದಾಳೆ ಅನ್ನೋ ಎಲ್ಲ ಸಿಕ್ರೇಟ್ಸ್ ನನಗೆ ಗೊತ್ತು ಎನ್ನುತ್ತಾರೆ.
ಮತ್ತೊಂದು ಕಡೆ ಇದು ಚೀಲದ ವಿಚಾರ ಅಲ್ಲ. ಶೀಲದ ವಿಚಾರ. ಆವತ್ತೆ ಅವರ ಹೆಂಡ್ತಿ ಹತ್ತಿರ ಹೋಗಿ ಹೇಳಬೇಕಾಗಿತ್ತು ಅಲ್ಲ ಎನ್ನುವುದು ಸೇರಿ ಸಾಕಷ್ಟು ಪ್ರಶ್ನೆಗಳನ್ನು ಗುರುಪ್ರಸಾದ್ ಎತ್ತಿದ್ದಾರೆ. ಆದರೆ, ಇದೇ ಗುರುಪ್ರಸಾದ್ ಇಷ್ಟು ವರ್ಷ ನೀವು ಯಾಕೆ ಸಿನಿಮಾ ಮಾಡಲಿಲ್ಲ ಎಂದು ಕೇಳಿದ ಪ್ರಶ್ನೆಗೆ ಈ ರೀತಿ ಉತ್ತರಿಸುತ್ತಾರೆ, ಇದುವರೆಗೂ ನನ್ನ ಮೂರು ಫಿಲ್ಮ್ ಬರಬೇಕಿತ್ತು. ಒಬ್ಬ ವ್ಯಕ್ತಿ, ಅವನ್ಯಾರಂತ ಮುಂದಿನ ದಿನ ಹೇಳ್ತೀನಿ. ಜನರ ಕೈಯಲ್ಲಿ ಚಪ್ಪಲಿಲಿ ಹೊಡಸ್ತೀನಿ ಅವನಿಗೆ. ನಾನು ಸಿನಿಮಾ ಮುಖಾಂತರ ಮಾತನಾಡ್ತೀನಿ. ಆತನ ಕಾರಣದಿಂದ ಮೂರು ಸಿನಿಮಾ ನಿಂತಿತು ನಂದು. ರಂಗನಾಯಕ ಸಿನಿಮಾ ನಿಲ್ಲಿಸಬೇಕಂತ ಓಡಾಡುತ್ತಿದ್ದ. ಈ ಕಾರಣಕ್ಕೆ ನಾನು ಸೈಲೆಂಟ್ ಆಗಬೇಕಾಯಿತು. ಒಬ್ಬ ಪಾಟರ್ನರ್ ಅಂತ ಬಂದು ಸಿನಿಮಾ ಕದ್ದುಕೊಂಡು ಹೋಗಿ 5 ಕೋಟಿ ಲಾಸ್ ಮಾಡಿದ. ಆತನ ಹೆಸರು ಹೇಳಲ್ಲ. ಎಸ್ಎಂ ಅಂತೀನಿ. ಅಂದರೆ ಬೈಗುಳ ಅಂತಾ ಒಂದು ಟಿವಿ ಸಂದರ್ಶನದಲ್ಲಿ ಹೇಳ್ತಾರೆ.
ಓರ್ವ ಪುರುಷನಾಗಿ, ಪುರುಷ ಪ್ರಧಾನ ವ್ಯವಸ್ಥೆಯಲ್ಲಿರುವ ಗುರುಪ್ರಸಾದ್ ಅವರಿಗೆ ತಮಗೆ ಮೋಸ ಮಾಡಿದವರು ಯಾರು? 5 ಕೋಟಿ ಲಾಸ್ ಮಾಡಿದವರು ಯಾರು ಎಂದು ಹೇಳಲು ಆಗುತ್ತಿಲ್ಲ. ಸಮಯ ಬರಲಿ ಅಂತಾರೆ. ಜನರಿಂದ ಚಪ್ಪಲಿಲಿ ಹೊಡಸ್ತೀನಿ ಅಂತಾರೆ. ಆದರೆ, ನಟಿ ಶ್ರುತಿ ಹರಿಹರನ್ ವಿಚಾರದಲ್ಲಿ ಮಾತ್ರ ಆವತ್ತೇ ಹೇಳಬೇಕಿತ್ತು. ಅದನ್ನು ಹೇಳಕ್ಕ ಇಷ್ಟು ವರ್ಷ ಬೇಕಿತ್ತಾ ಅಂತಾ ಕೇಳ್ತಾರೆ. ಕಾಸ್ಟ್ ಕೌಚಿಂಗ್ ಅನ್ನೋ ಪೆಡಂಭೂತ ನಟಿಯರನ್ನು ಎಷ್ಟೊಂದು ಹುರಿದು ಮುಕ್ಕುತ್ತಿದೆ, ಅದನ್ನು ಹೇಗೆ ಕಂಟ್ರೋಲ್ ಮಾಡುತ್ತಿದೆ ಅನ್ನೋದು ಚಿತ್ರರಂಗದಲ್ಲಿರುವ ನಿರ್ದೇಶಕ ಗುರುಪ್ರಸಾದ್ ಅವರಿಗೆ ಚೆನ್ನಾಗಿ ಗೊತ್ತು. ಆದರೆ, ಇಲ್ಲಿ ವಿನಾಃಕಾರಣ ನಟಿಯರಾದ ಶ್ರುತಿ, ಶ್ರುತಿ ಹರಿಹರನ್ ಹೆಸರನ್ನು ತಳಕು ಹಾಕುತ್ತಿದ್ದಾರೆ. ಕಾರಣ ತಮ್ಮ ಚಿತ್ರಕ್ಕೆ ಬಿಟ್ಟಿ ಪ್ರಚಾರ ಸಿಗಲಿ ಎಂದು ಸಿನಿ ಪ್ರಿಯರು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರ ಹಾಕುತ್ತಿದ್ದಾರೆ.