ಭಗವಾ ಧ್ವಜ ಮರುಸ್ಥಾಪನೆಗಾಗಿ ಬೆಳಗಾವಿಯಲ್ಲಿ ಜಾಥಾ

157

ಪ್ರಜಾಸ್ತ್ರ ಸುದ್ದಿ

ಬೆಳಗಾವಿ: ಮಂಡ್ಯದಲ್ಲಿ ಹನುಮಧ್ವಜದ ವಿವಾದ ಇನ್ನು ಹಾಗೇ ಇದೆ. ಇದರ ನಡುವೆ ಈಗ ಬೆಳಗಾವಿಯಲ್ಲಿ ಭಗವಾ ಧ್ವಜ ಮರುಸ್ಥಾಪನೆಗಾಗಿ ಜಾಥಾ ನಡೆಸಲು ಹಿಂದೂಪರ ಸಂಘಟನೆಗಳು ಮುಂದಾಗಿವೆ. ಆದರೆ, ಪೊಲೀಸರು ಜಾಥಾಗೆ ಅನುಮತಿ ನೀಡಿಲ್ಲ.

ಎಂ.ಕೆ ಹುಬ್ಬಳ್ಳಿಯ ಸಂಬಣ್ಣವರ ಓಣಿಯಲ್ಲಿನ ಹನುಮಂತ ದೇವಸ್ಥಾನದ ಹತ್ತಿರ ಇತ್ತೀಚೆಗೆ ತೆರವಾಗಿದ್ದ ಭಗವಾ ಧ್ವಜ ಮರುಸ್ಥಾಪನೆಗಾಗಿ ಜಾಥಾ ನಡೆಸಲು ಮುಂದಾಗಿದ್ದಾರೆ. ಹೀಗಾಗಿ ಪೊಲೀಸ್ ಭದ್ರತೆ ನೀಡಲಾಗಿದೆ. ಇಲ್ಲಿ ಮೊದಲಿನಿಂದಲೂ ಭಗವಾ ಧ್ವಜವಿದೆ. ಮರುಸ್ಥಾಪನೆಗೆ ಅವಕಾಶ ನೀಡಬೇಕು ಎಂದು ಪಟ್ಟಣ ಪಂಚಾಯ್ತಿಗೆ ಮನವಿ ಸಲ್ಲಿಸಲಾಗಿದೆ.

ಈ ವಿಚಾರ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಎಸ್ಪಿ ಡಾ.ಭೀಮಾಶಂಕರ ಗುಳೇದ್, ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!