ಮೈಸೂರು: ರಾಜ್ಯದ ಮೈತ್ರಿ ಸರ್ಕಾರ ಬೀಳಿಸಲು ನಾವು ಕಾರಣರಲ್ಲ ಅಂತಾ ಅನರ್ಹ ಶಾಸಕ ಹೆಚ್.ವಿಶ್ವನಾಥ ಹೇಳಿದ್ದಾರೆ. ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಹೆಚ್.ವಿಶ್ವನಾಥ, ದೋಸ್ತಿ ಸರ್ಕಾರವನ್ನ ಯಾರು ಮುನ್ನೆಡೆಸಿದ್ದರೋ ಅವರಿಂದಲೇ ಸರ್ಕಾರ ಬಿದ್ದಿದೆ ಅಂತಾ ಹೇಳಿದ್ರು.
ಸರ್ಕಾರದಲ್ಲಿದ್ದ ಪ್ರಮುಖ ನಾಯಕರು ಮಾಲೀಕರಂತೆ ನಡೆದುಕೊಂಡರು. ನಾಯಕರಂತೆ ನಡೆದುಕೊಂಡಿದ್ರೆ ಸರ್ಕಾರ ಉಳಿಯುತಿತ್ತು. ಮೈತ್ರಿ ಸರ್ಕಾರ ರಚನೆಗೆ ನಾವು ಕಾರಣರೂ ಅಲ್ಲ. ಪತನಕ್ಕೂ ನಾವು ಕಾರಣರಲ್ಲ ಅಂತಾ ತಿಳಿಸಿದ್ರು. ಮಂಡ್ಯ ಜನ ನಮ್ಗೆ ವಿಷ ಉಣಿಸಿದರು ಎಂದು ಕೆ.ಆರ್ ಪೇಟೆಯಲ್ಲಿ ಕುಮಾರಸ್ವಾಮಿ ನಿನ್ನೆ ಹೇಳಿದ್ದಾರೆ. ದೇವೇಗೌಡರ ಕುಟುಂಬಕ್ಕೆ ವಿಷ ಉಣಿಸಿದ್ದು ಸಾ.ರಾ ಮಹೇಶ ಎಂದು ಗಂಭೀರ ಆರೋಪ ಮಾಡಿದ್ರು.
ಸದನದಲ್ಲಿ ಮಾತ್ನಾಡಿದ್ರೆ ಕೋರ್ಟ್ ಗೆ ಹೋಗಲು ಬರೋದಿಲ್ಲವೆಂದು ಅಪ್ಪನಾಣೆ, ಅಮ್ಮನಾಣೆ ಹಾಕ್ತಿಯಾ. ನಿನ್ನೊಬ್ಬ ಮಂತ್ರಿನಾ, ರಾಜಕಾರಣಿನಾ ಅಂತಾ ಸಾರಾ ವಿರುದ್ಧ ಆಕ್ರೋಶ ಹೊರ ಹಾಕಿದ್ರು. ನನ್ನ ಮತ್ತು ಸಿದ್ದರಾಮಯ್ಯ ನಡುವೆ ಕಂದಕ ಉಂಟಾಗಲು ಸಾ ರಾ ಮಹೇಶ ಕಾರಣ ಅಂತಾ ಹೇಳಿದ್ರು.
ಲೋಕಸಭೆ ಚುನಾವಣೆಯ ಸೋಲಿನ ಹೊಣೆ ಹೊತ್ತು ರಾಹುಲ ಗಾಂಧಿ ರಾಜೀನಾಮೆ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಸೋಲಿನ ಹೊಣೆ ಹೊತ್ತು ನಾನು ರಾಜೀನಾಮೆ ಕೊಟ್ಟೆ. ನೀವು ಯಾವಾಗ ಕೊಡ್ತೀರಿ ಅಂತಾ ಸಿದ್ದರಾಮಯ್ಯನವರನ್ನ ಹೆಚ್.ವಿಶ್ವನಾಥ ಪ್ರಶ್ನೆ ಮಾಡಿದ್ರು. ಇನ್ನು ಹೆಚ್.ವಿಶ್ವನಾಥ ಮಾಧ್ಯಮಗೋಷ್ಠಿಗೆ ಪೊಲೀಸ್ ಭದ್ರತೆಯನ್ನ ಒದಗಿಸಲಾಗಿತ್ತು. ಜೆಡಿಎಸ್ ಕಾರ್ಯಕರ್ತರು ಬಂದು ಗಲಾಟೆ ಮಾಡುವ ಹಿನ್ನೆಲೆಯಲ್ಲಿ ಎಸಿಪಿ ಹಂತದ ಪೊಲೀಸ್ ಭದ್ರತೆಯನ್ನ ನೀಡಲಾಗಿತ್ತು.