ಸೂರ್ಯ ಗ್ರಹಣ: ಕುಕ್ಕೆ ಸುಬ್ರಮಣ್ಯ ಭಕ್ತರಿಗೆ ಸೂಚನೆ

476

ಮಂಗಳೂರು: ಡಿಸೆಂಬರ್ 25ಕ್ಕೆ ಸೂರ್ಯ ಗ್ರಹಣ ಸಂಭವಿಸಲಿದೆ. ಹೀಗಾಗಿ ನಾಡಿನ ಪ್ರಸಿದ್ಧ ದೇಗುಲಗಳಲ್ಲಿ ಒಂದಾದ ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಆಡಳಿತ ಮಂಡಳಿ ಭಕ್ತರಿಗೆ ಸೂಚನೆ ನೀಡಿದೆ. ಡಿಸೆಂಬರ್ 25ರ ಸಂಜೆ 6.30ರ ಪೂಜೆ ಬಳಿಕ ಅಂದು ರಾತ್ರಿ ಭೋಜನ ವ್ಯವಸ್ಥೆ ಇರುವುದಿಲ್ಲವೆಂದು ತಿಳಿಸಲಾಗಿದೆ.

ಓದುಗರ ಗಮನಕ್ಕೆ

ಇನ್ನು ಡಿಸೆಂಬರ್ 26ರ ಸಂಜೆ 5ಗಂಟೆಯ ಬಳಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದು ಡಿಸೆಂಬರ್ 25 ಹಾಗೂ 26ಕ್ಕೆ ಮಾತ್ರ ಅನ್ವಯಿಸುತ್ತೆ ಅಂತಾ ತಿಳಿಸಲಾಗಿದೆ. ಹೀಗಾಗಿ ಅಂದು ದೇವಸ್ಥಾನದ ಎಲ್ಲ ಸೇವೆಗಳು ಬಂದ್ ಆಗಿರುತ್ತೆ. ಮಧ್ಯಾಹ್ನ ಸಹ ಭೋಜನ ವ್ಯವಸ್ಥೆ ಇರುವುದಿಲ್ಲವೆಂದು ಪ್ರಕಟಣೆಯ ಮೂಲಕ ಭಕ್ತರಿಗೆ ತಿಳಿಸಲಾಗಿದೆ. ಹೀಗಾಗಿ ಬೇರೆ ಬೇರೆ ಊರುಗಳಿಂದ ದರ್ಶನಕ್ಕೆ ಬರುವ ಭಕ್ತರು ಈ ಎರಡು ದಿನಗಳನ್ನ ಹೊರತು ಪಡಿಸಿ ಬರುವುದು ಸೂಕ್ತ.

ಕ್ರಿಸ್ಮಸ್ ಹಬ್ಬದ ಮರುದಿನ ಸೂರ್ಯಗ್ರಹಣ ಸಂಭವಿಸಲಿದೆ. ಕರ್ನಾಟಕದಲ್ಲಿ ಶೇಕಡ 85ರಷ್ಟು ಗ್ರಹಣ ನೋಡಬಹುದು. ಬೆಳಗ್ಗೆ 8ಗಂಟೆ 5 ನಿಮಿಷಕ್ಕೆ ಗ್ರಹಣ ಶುರುವಾಗಲಿದೆ.




Leave a Reply

Your email address will not be published. Required fields are marked *

error: Content is protected !!