ಸಿಂದಗಿ: ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಡಿಸೆಂಬರ್ 24 ರಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ವಿವಿಧಪರ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಸಲಾಗ್ತಿದೆ. ಈ ಬಗ್ಗೆ ಇಂದು ಸುದ್ದಿಗೋಷ್ಠಿ ನಡೆಸಿದ ಒಕ್ಕೂಟದ ಮುಖಂಡರು, ಅಂದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ, ಕೇಂದ್ರದ ಜನವಿರೋಧಿ ನೀತಿಯನ್ನ ಖಂಡಿಸಬೇಕು ಅಂತಾ ಹೇಳಿದ್ರು.
ಈ ವೇಳೆ ಮಾತ್ನಾಡಿದ ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಡಾ.ದಸ್ತಗೀರ ಮುಲ್ಲಾ, ಡಿಸೆಂಬರ್ 24ರಂದು ಬೆಳಗ್ಗೆ 10.30ಕ್ಕೆ ಪ್ರಗತಿಪರ ಒಕ್ಕೂಟಗಳ ಸಂಘಟನೆ ವತಿಯಿಂದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಲಾಗ್ತಿದೆ. ಹಜರತ್ ಟಿಪ್ಪು ಸುಲ್ತಾನ್ ಸರ್ಕಲ್ ನಿಂದ ಬಸ್ ನಿಲ್ದಾಣ ಮಾರ್ಗವಾಗಿ ಪ್ರತಿಭಟನೆ ಮೆರವಣಿಗೆ ಹೊರಟು, ಡಾ.ಬಿ.ಆರ್ ಅಂಬೇಡ್ಕರ್ ಸರ್ಕಲ್ ಬಳಿಯಿರುವ ಅಂಜುಮನ್ ಈದ್ಗಾ ಮೈದಾನದಲ್ಲಿ ಸಮಾವೇಶಗೊಳ್ಳುವ ಮೂಲಕ, ಕೇಂದ್ರದ ಸಂವಿಧಾನ ವಿರೋಧಿ ನೀತಿಯನ್ನ ಖಂಡಿಸಲಾಗುತ್ತೆ ಅಂತಾ ತಿಳಿಸಿದ್ರು.
ಈ ವೇಳೆ ಮಫ್ತಿ ಶೊಯಬ ಅಹ್ಮದ, ಶಬ್ಬೀರ ಪಟೇಲ, ಜಗದೀಶ ಕಲಬುರ್ಗಿ, ಸಲೀಂ ಅಲ್ದಿ, ಸಲೀಂ ಜಮಾದಾರ, ಆಸೀಫ ಅಶ್ಪಾಕ, ರಾಜು ಮಾದರ, ಹಾಸೀಂ ಆಳಂದ, ರಜಾಕ ಮುಜಾವರ, ಬಾಬು ಮರ್ತೂರ, ಅಶೋಕ ಕೋರಳ್ಳಿ ಭಾಗವಹಿಸಿದ್ರು.