‘ವಾಲ್ಮೀಕಿ’ ಮೀಸಲಾತಿ ಬೀದಿಯಲ್ಲಿ ಆದೇಶ ಮಾಡುವುದಲ್ಲ: ಸಿಎಂ

396

ಕಲಬುರಗಿ: ವಾಲ್ಮೀಕಿ ಸಮುದಾಯವದವರಿಗೆ ಶೇ.7.5 ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಮಾತ್ನಾಡಿದ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು, ಇದನ್ನ ಬೀದಿಯಲ್ಲಿ ನಿಂತು ಆದೇಶ ಮಾಡುವುದಲ್ಲ ಅಂತಾ ಹೇಳಿದ್ದಾರೆ.

ಮಾಧ್ಯಮದವರು ಸಿಎಂ ಅವರಿಗೆ ಮೀಸಲಾತಿ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಹೀಗೆ ಉತ್ತರಿಸಿದ್ದಾರೆ. ಇನ್ನು ಕಲಬುರಗಿ ಜಿಲ್ಲೆಯ ಅಭಿವೃದ್ಧಿಗಾಗಿ 500 ಕೋಟಿ ರೂಪಾಯಿ ವೆಚ್ಚ ಮಾಡಲು ಆಡಳಿತಾತ್ಮಕ ಒಪ್ಪಿಗೆ ನೀಡಲಾಗಿದೆ ಅಂತಾ ಸಿಎಂ ಹೇಳಿದ್ದಾರೆ.

ಹೈದ್ರಾಬಾದ್ ಕರ್ನಾಟಕ ಭಾಗದ ಶೈಕ್ಷಣಿಕ ಹಾಗೂ ಆರೋಗ್ಯದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ ಜಯದೇವ ಹೃದ್ರೋಗ ಆಸ್ಪತ್ರೆಗೆ 150 ಕೋಟಿ ರೂಪಾಯಿ ಒದಗಿಸಲಾಗುವುದು ಅಂತಾ ಸಿಎಂ ತಿಳಿಸಿದ್ದಾರೆ.

ಭೀಮಾ ನದಿಗೆ ಮಹಾರಾಷ್ಟ್ರದಿಂದ ನೀರು ಹರಿಸುವ ವಿಚಾರಕ್ಕೆ, ಮಹಾರಾಷ್ಟ್ರ ಸಿಎಂ ಫಡ್ನವೀಸ್ ಅವರಿಗೆ 2 ಬಾರಿ ಸಮಯ ಕೇಳಿದ್ದೆ. ಅವರು ಚರ್ಚೆಗೆ ಬರ್ತಿಲ್ಲ ಅಂತಾ ಹೇಳಿದ್ರು.


TAG


Leave a Reply

Your email address will not be published. Required fields are marked *

error: Content is protected !!