ಐಟಿ ಸಿಟಿಯಲ್ಲಿ ಭರ್ಜರಿ ಮಳೆ: ಇಟ್ಟಿಗೆ ಬಿದ್ದು ಯುವತಿ ಸಾವು

288

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ನಗರದಲ್ಲಿ ನಿನ್ನೆ ಸಂಜೆ ಸುರಿದ ಭಾರಿ ಮಳೆ, ಗಾಳಿಯಿಂದಾಗಿ ಯುವತಿಯೊಬ್ಬಳು ಸಾವನ್ನಪ್ಪಿದ ಘಟನೆ ನಡೆದಿದೆ. ಜೋರು ಮಳೆ ಗಾಳಿಯಿಂದಾಗಿ, ನಿರ್ಮಾಣ ಹಂತದಲ್ಲಿದ್ದ 3ನೇ ಅಂತಸ್ತಿನ ಮನೆ ಮೇಲಿಂದ ಇಟ್ಟಿಗೆ ಬಿದ್ದು ಯುವತಿ ಸಾವನ್ನಪ್ಪಿದ್ದಾಳೆ.

ಮೃತ ಯುವತಿ ಶಿಲ್ಪಾ

ನಂದಿನಿ ಲೇಔಟ್ ನಿವಾಸಿ ರಾಜಣ್ಣ ಎಂಬುವರ ಮಗಳು 21 ವರ್ಷದ ಶಿಲ್ಪಾ ಮೃತ ಯುವತಿಯಾಗಿದ್ದಾಳೆ. ಘಟನೆ ನಡೆದ ತಕ್ಷಣ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ, ಅದಾಗ್ಲೇ ಶಿಲ್ಪಾ ಸಾವನ್ನಪ್ಪಿದ್ದಳು ಅನ್ನೋದು ತಿಳಿದು ಬಂದಿದೆ. ವಿಷಯ ತಿಳಿದ ನಂತರ, ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ.ಗೋಪಾಲಯ್ಯನವರು ಆಸ್ಪತ್ರೆಗೆ ಭೇಟಿ ನೀಡಿ, 50 ಸಾವಿರ ರೂಪಾಯಿ ಪರಿಹಾರ ನೀಡಿದ್ದಾರೆ.

ಬಿಎಸ್ ಸಿ ಮುಗಿಸಿದ್ದ ಶಿಲ್ಪಾ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ಳು. ನಿನ್ನೆ ಸಂಜೆ ಜೋರಾದ ಗಾಳಿ, ಮಳೆಯಿಂದಾಗಿ ಕಟ್ಟಡದ ಮೇಲಿನ ಇಟ್ಟಿಗೆ ಪಕ್ಕದ ಮನೆಯ ಸೀಟಿನ ಮೇಲೆ ಬಿದ್ದಿದೆ. ಆಗ ಮನೆಯಲ್ಲಿದ್ದ ಶಿಲ್ಪ ಪ್ರಾಣಕ್ಕೆ ಕುತ್ತಾಗಿದೆ. ಸ್ಥಳಕ್ಕೆ ಬಿಬಿಎಂಪಿ ಅಧಿಕಾರಿಗಳು, ನಂದಿನಿ ಲೇಔಟ್ ಪೊಲೀಸ್ರು ಭೇಟಿ ನೀಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!