ಬ್ರೇಕಿಂಗ್ ನ್ಯೂಸ್: ವಿಜಯಪುರ ತೋಟಗಾರಿಕೆ ನಿರೀಕ್ಷಕ ಎಸಿಬಿ ಬಲೆಗೆ

299

ಪ್ರಜಾಸ್ತ್ರ ಸುದ್ದಿ

ವಿಜಯಪುರ: ವಸತಿ ಯೋಜನೆಯಡಿ ಜಿಪಿಎಸ್ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ತೋಟಗಾರಿಕೆ ನಿರೀಕ್ಷಕ ಎಸಿಬಿ ಬಲೆಗೆ ಬಿದ್ದಿದ್ದಾನೆ. ವಿಜಯಪುರ ಮಹಾನಗರ ಪಾಲಿಕೆ ತೋಟಗಾರಿಕೆ ಪ್ರಭಾರ ನಿರೀಕ್ಷಕ ಶಾಂತಪ್ಪ ಪತ್ತಾರ ಎಸಿಬಿ ಬಲೆಗೆ ಬಿದ್ದ ಅಧಿಕಾರಿಯಾಗಿದ್ದಾನೆ.

ವಾಜಪೇಯಿ ಆಶ್ರಯ ವಸತಿ ಯೋಜನೆಯಡಿ ಜಿಪಿಎಸ್ ಮಾಡಿ ಕೊಡಲು ಜಗದೇವಿ ಚಾವೂರ ಎಂಬುವವರಿಗೆ 20 ಸಾವಿರ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದು, ಈಗಾಗಲೇ 10 ಸಾವಿರ ರೂಪಾಯಿ ಪಡೆದಿದ್ದ. ಮತ್ತೇ 10 ಸಾವಿರ ಹಣಕ್ಕಾಗಿ ಜಗದೇವಿಯ ಮನೆಗೆ ಬಂದಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಎಸಿಬಿ ಡಿವೈಎಸ್ಪಿ ಮಂಜುನಾಥ ಗಗ್ಗಲ್ ನೇತೃತ್ವದಲ್ಲಿ ಸಿಪಿಐ  ಹರಿಶ್ಚಂದ್ರ, ಪರಮೇಶ್ವರ ಕವಟಗಿ ತಂಡದಿಂದ ದಾಳಿ ಮಾಡಿ, ಅಧಿಕಾರಿಯನ್ನ ವಶಕ್ಕೆ ಪಡೆಯಲಾಗಿದೆ.




Leave a Reply

Your email address will not be published. Required fields are marked *

error: Content is protected !!