ಪ್ರಜಾಸ್ತ್ರ ಸುದ್ದಿ
ಭೋಪಾಲ್: ಆಸ್ಪತ್ರೆಗಳು ಅನ್ನೋದು ರೋಗಿಗಳ ಪಾಲಿಗೆ ದೇವಸ್ಥಾನ. ವೈದ್ಯರು ದೇವರು ಇದ್ದಂತೆ ಅನ್ನೋ ಮಾತಿದೆ. ಆದ್ರೆ, ಕಮರ್ಷಿಯಲ್ ಅನ್ನೋ ಹಪಾಹಪಿಯಿಂದಾಗಿ ವೈದ್ಯರು, ಸಿಬ್ಬಂದಿ, ಆಡಳಿತ ಮಂಡಳಿ ಮನುಷ್ಯತ್ವ ಕಳೆದುಕೊಂಡು ವರ್ತಿಸ್ತಿದೆ ಅನ್ನೋದಕ್ಕೆ ಹಲವು ಸಾಕ್ಷಿಗಳಿವೆ. ಅದರಲ್ಲಿ ಇದೊಂದು ಸೇರಿದೆ.
ಶಾಹಾಜಪುರದ ಸಿಟಿ ಆಸ್ಪತ್ರೆಯಲ್ಲಿ ಬಾಕಿ ಬಿಲ್ ಕಟ್ಟದಿರುವ ಕಾರಣಕ್ಕೆ 80 ವರ್ಷದ ವೃದ್ಧನ ಕೈ ಕಾಲು ಕಟ್ಟಿ ಹಾಕಿದ ಘಟನೆ ನಡೆದಿದೆ. ಈ ಮೊದ್ಲು 5000 ಸಾವಿರ ರೂಪಾಯಿಯನ್ನ ಆತನ ಮಗಳು ಕಟ್ಟಿದ್ದಾಳೆ. ಆದ್ರೆ, ಚಿಕಿತ್ಸೆ ಮುಂದುವರೆದ ಪರಿಣಾಮ ಕೆಲ ದಿನಗಳು ಉಳಿದಿದ್ದಾರೆ. ಹೀಗಾಗಿ 11 ಸಾವಿರ ಬಿಲ್ ಆಗಿದೆ.
ಉಳಿದ ಬಿಲ್ ಕೊಡಲು ಆಗಿಲ್ಲ ಅವರಿಗೆ. ಹೀಗಾಗಿ ಅವರಿಂದ ಹೇಗಾದ್ರೂ ಮಾಡಿ ಬಿಲ್ ವಸೂಲಿ ಮಾಡಬೇಕೆಂದು ಆಸ್ಪತ್ರೆ ಬೆಡ್ ನಲ್ಲಿಯೇ 80 ವರ್ಷದ ವೃದ್ಧನ ಕೈಕಾಲು ಕಟ್ಟಿ ಹಾಕಿದ್ದಾರೆ. ಇದರ ಫೋಟೋ, ವಿಡಿಯೋ ವೈರಲ್ ಆಗಿ ಮಾಧ್ಯಮದಲ್ಲಿ ಸುದ್ದಿ ಬರ್ತಿದ್ದಂತೆ ವೃದ್ಧನನ್ನ ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ಪೊಲೀಸ್ರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ. ವರದಿ ಬಂದ್ಮೇಲೆ ಮುಂದಿನ ಕ್ರಮ ಎಂದು ಹೇಳಲಾಗ್ತಿದೆ.