‘ಸಾಲದ ಕುಣಿಕೆ’ಗೆ ಸಿಂದಗಿ ರೈತ ಶರಣು

584

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಸಾಲಬಾಧೆ ತಾಳಲಾರದೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಿಂದಗಿ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಹಡಗಿನಾಳ ಗ್ರಾಮದ 30 ವರ್ಷದ ಗಂಗಪ್ಪ ಶಿರಶ್ಯಾಡ ಅನ್ನೋ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೂರು ಎಕರೆ ಜಮೀನು ಹೊಂದಿದ್ದ ರೈತ ಗಂಗಪ್ಪ, ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕ್ ನಲ್ಲಿ ಒಂದೂವರೆ ಲಕ್ಷ ರೂಪಾಯಿ ಸಾಲ‌ ಮಾಡಿಕೊಂಡಿದ್ದ. ಇದನ್ನ ತೀರಿಸಲು ಆಗದೆ ತನ್ನ ಜಮೀನಿನಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಲಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ




Leave a Reply

Your email address will not be published. Required fields are marked *

error: Content is protected !!