ಪ್ರಜಾಸ್ತ್ರ ಸಿನಿಮಾ ಡೆಸ್ಕ್
ನಟ ಹಾಗೂ ಬಿಗ್ ಬಾಸ್ ಶೋನ ಸ್ಪರ್ಧಿಯಾಗಿದ್ದ ಹುಚ್ಚ ವೆಂಕಟ ಮೇಲೆ ಹಲ್ಲೆ ಮಾಡಿದ ಸಂಬಂಧ, ಆರೋಪಿಗಳ ವಿರುದ್ಧ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡಿದ್ದಾರೆ. ಮಂಡ್ಯ ಜಿಲ್ಲೆ ಶ್ರೀನಿವಾಸಪುರ ಹತ್ತಿರದ ಉಮ್ಮಡಹಳ್ಳಿ ಗೇಟ್ ಬಳಿ ಕೆಲ ಯುವಕರು ಹಲ್ಲೆ ಮಾಡಿದ್ರು.
ನಟ ಹುಚ್ಚ ವೆಂಕಟ ಮೇಲಿನ ಹಲ್ಲೆ ಸಂಬಂಧ ನಟ ದುನಿಯಾ ವಿಜಿ ಹಾಗೂ ನಟ ಜಗ್ಗೇಶ ಆಕ್ರೋಶ ವ್ಯಕ್ತಪಡಿಸಿದ್ರು. ಹಲ್ಲೆ ಮಾಡಿದವರ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ರು. ಹೀಗಾಗಿ ಗ್ರಾಮಾಂತರ ರಾಣೆ ಪೊಲೀಸ್ರು ಸ್ವಯಂ ಎಫ್ಐಆರ್ ದಾಖಲಿಸಿದ್ದಾರೆ.