ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕರೋನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡಿದ್ರೆ 5 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಬೇಕಾಗುತ್ತೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ ಹೇಳಿದ್ದಾರೆ. ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ವೈದ್ಯೆಯೊಬ್ಬರ ಮೇಲೆ ಸೋಂಕಿತರ ಕುಟುಂಬಸ್ಥರು ಹಲ್ಲೆ ಮಾಡಿರುವುದು ವಿಷಾದ ಎಂದರು.
ಕರೋನಾ ವಾರಿಯರ್ಸ್ ಹಲ್ಲೆ ಮಾಡದಿರಲು ಹೊಸ ಕಾನೂನು ಜಾರಿಗೆ ತರಲಾಗಿದೆ. ಆದ್ರಿಂದ ಯಾರೂ ಇಂತಹ ಪ್ರಯತ್ನ ಮಾಡಬೇಡಿ. ಕರೋನಾ ಸೋಂಕಿತರು ಮೃತಪಟ್ಟರೆ ಕುಟುಂಬಸ್ಥರೆ ಬರುವುದಿಲ್ಲ. ವೈದ್ಯರು, ದಾದಿಯರು ಪ್ರಾಣ ಪಣಕ್ಕಿಟ್ಟು ಕೆಲಸ ಮಾಡ್ತಿದ್ದಾರೆ. ಯಾರಾದರೂ ತಪ್ಪಿದ್ರೆ ದೂರು ಕೊಡಿ ಕ್ರಮ ತೆಗೆದುಕೊಳ್ಳುತ್ತೇವೆ. ಹಲ್ಲೆ ಮಾಡಬೇಡಿ ಎಂದರು.