ಪ್ರಜಾಸ್ತ್ರ ಸುದ್ದಿ
ಬೆಳಗಾವಿ: ಸಚಿವ ಸತೀಶ್ ಜಾರಕಿಹೊಳಿಗೆ ಸರ್ಕಾರದಲ್ಲಿ ಕಿರುಕುಳವಾಗುತ್ತಿದೆ. ಸಿದ್ದರಾಮಯ್ಯ ಸಿಎಂ ಇದ್ದ ಸಂದರ್ಭದಲ್ಲಿಯೇ ಹೀಗೆ. ಬೇರೆಯವರು ಸಿಎಂ ಆಗಿದ್ದರೆ ಯಾವ ಪರಿಸ್ಥಿತಿ ಬರುತ್ತಿತ್ತು ಎಂದು ಹೇಳಲಾಗುತ್ತಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವ ಸತೀಶ್ ಜಾರಿಕೊಳಿ, ನನಗೆ ಯಾವುದೇ ಕಿರುಕುಳ ಇಲ್ಲ ಎಂದಿದ್ದಾರೆ.
ಸರ್ಕಾರದಲ್ಲಿ ನನಗೆ ಯಾವುದೇ ಸಮಸ್ಯೆಯಿಲ್ಲ. ಒಂದು ವೇಳೆ ಹಾಗೆನಾದರೂ ಇದ್ದರೆ ಹೇಳುತ್ತೇನೆ ಎಂದರು. ಹೆಣ್ಣಿನ ಹಸ್ತಕ್ಷೇಪದಿಂದ ಸರ್ಕಾರಕ್ಕೆ ಕಂಟಕ ಎನ್ನುವ ಕಾರ್ಣಿಕ ವಿಚಾರವಾಗಿ ಹೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅದೆಲ್ಲ ಹಳೆಯ ವಿಡಿಯೋ ಇರಬೇಕು ನೋಡಿ. ಇದನ್ನೆಲ್ಲ ನಾನು ನಂಬುವುದಿಲ್ಲ ಅಂತಾ ಹೇಳಿದ್ದಾರೆ.