ವರ್ಗಾವಣೆ ಪ್ರಶ್ನಿಸಿ ಕೆಎಟಿ ಕದ ತಟ್ಟಿದ ಐಎಎಸ್ ಅಧಿಕಾರಿ ಬಿ.ಶರತ

460

ಪ್ರಜಾಸ್ತ್ರ ಸುದ್ದಿ

ಮೈಸೂರು: ಈ ಹಿಂದೆ ಮೈಸೂರಿನ ಜಿಲ್ಲಾಧಿಕಾರಿಯಾಗಿದ್ದ ಅಭಿರಾಮ ಬಿ.ಶಂಕರ ಅವರ ಜಾಗಕ್ಕೆ ತಿಂಗಳ ಹಿಂದೆಯಷ್ಟೇ ಕಲಬುರಗಿ ಡಿಸಿಯಾಗಿದ್ದ ಬಿ.ಶರತ ಅವರನ್ನ ನೇಮಕ ಮಾಡಲಾಗಿತ್ತು. ಇದೀಗ ಇವರನ್ನ ವರ್ಗಾ ಮಾಡಿ ರೋಹಿಣಿ ಸಿಂಧೂರಿ ಅವರನ್ನ ನೇಮಕ ಮಾಡಲಾಗಿದೆ.

ಹೀಗೆ ತಿಂಗಳು ಕಳೆಯುವುದರೊಳಗೆ ತಮ್ಮ ವರ್ಗಾವಣೆ ಮಾಡಿರುವುದನ್ನ ಪ್ರಶ್ನಿಸಿ ಐಎಎಸ್ ಅಧಿಕಾರಿ ಬಿ.ಶರತ ಅವರು, ಕರ್ನಾಟಕ ಆಡಳಿತ ನ್ಯಾಯಮಂಡಳಿ(ಕೆಎಟಿ)ಗೆ ಮೊರೆ ಹೋಗಿದ್ದು, ಈ ಅರ್ಜಿಯ ಸಂಬಂಧ ರಾಜ್ಯ ಸರ್ಕಾರಕ್ಕೆ ಕೆಇಟಿ ನೋಟಿಸ್ ಜಾರಿ ಮಾಡಿದೆ.

ಆಡಳಿತಾತ್ಮಕ ಕಾನೂನು ಪ್ರಕಾರ ತಮ್ಗೆ ಸೂಕ್ತ ಕಾರಣವನ್ನು ನೀಡಿದೆ ದೀಢರ್ ಎಂದು ವರ್ಗಾವಣೆ ಮಾಡಲಾಗಿದೆ. ಸರ್ಕಾರದ ಈ ಆದೇಶ ಕಾನೂನು ಬಾಹಿರವಾಗಿದೆ. ಆದ್ರಿಂದ ತಮ್ಮ ವರ್ಗಾವಣೆ ಆದೇಶವನ್ನ ರದ್ದಪಡಿಸಬೇಕೆಂದು ಬಿ.ಶರತ ಅರ್ಜಿ ಸಲ್ಲಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!