ಪ್ರಜಾಸ್ತ್ರ ಕ್ರೀಡಾ ಸುದ್ದಿ
ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಇಂದು ಸಂಜೆ 7.30ಕ್ಕೆ ಕಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ತಾನ್ ರಾಯಲ್ಸ್ ನಡುವೆ ಪಂದ್ಯ ನಡೆಯುತ್ತಿದೆ. ಈಗಾಗ್ಲೇ ಆಡಿರುವ 2 ಪಂದ್ಯಗಳಲ್ಲಿ ಗೆಲುವು ದಾಖಲಿಸಿರುವ ಸ್ಮಿತ್ ಟೀಂ ಇಂದು ಹ್ಯಾಟ್ರಿಕ್ ಜಯ ಸಾಧಿಸುತ್ತಾ ಅನ್ನೋ ಪ್ರಶ್ನೆ ಮೂಡಿದೆ.
ಇನ್ನು ದಿನೇಶ ಕಾರ್ತಿಕ ಟೀಂ 2 ಪಂದ್ಯಗಲ್ಲಿ 1 ಗೆಲುವು, 1 ಸೋಲು ಅನುಭವಿಸಿ ಪಾಯಿಂಟ್ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಇವತ್ತಿನ ಪಂದ್ಯ ಗೆಲ್ಲುವ ಮೂಲಕ ಮೇಲಿನ ಸ್ಥಾನಕ್ಕೆ ಹೋಗುತ್ತಾ ಅನ್ನೋ ಕುತೂಹಲ ಅವರ ಅಭಿಮಾನಿಗಳಲ್ಲಿದೆ.
ಇನ್ನು ರಾಜಸ್ಥಾನ್ ರಾಯಲ್ಸ್ ಟೀಂ ಟಾಸ್ ಗೆದ್ದಿದ್ದು, ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಎರಡನೇ ಇನ್ನಿಂಗ್ಸ್ ಆಡಿದ ತಂಡಗಳು ಗೆಲುವು ದಾಖಲಿಸ್ತಿರುವುದ್ರಿಂದ ಸಹಜವಾಗಿಯೇ ಟಾಸ್ ಮುಖ್ಯವಾಗ್ತಿದ್ದು, ಆರ್.ಆರ್ ಕ್ಯಾಪ್ಟನ್ ಸ್ಮಿತ್ ಸಹ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.