ಪ್ರಜಾಸ್ತ್ರ ಕ್ರೀಡಾ ಸುದ್ದಿ
ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ನಡುವೆ ಪಂದ್ಯ ನಡೆಯಲಿದೆ. ಮಧ್ಯಾಹ್ನ 3.30ಕ್ಕೆ ಪಂದ್ಯ ಶುರುವಾಗಲಿದ್ದು, ಟಾಸ್ ಗೆದ್ದಿರುವ ಆರ್ ಆರ್ ಕ್ಯಾಪ್ಟನ್ ಸ್ಮಿತ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಬೆನ್ ಸ್ಟೋಕ್, ಸ್ಮಿತ್, ಬಟ್ಲರ್, ಸ್ಯಾಮ್ಸನ್, ಉತ್ತಪ್ಪ, ಪರಾಗ್, ತೇವಾಟಿಯಾ ಆಟಗಾರರ ಬ್ಯಾಟಿಂಗ್ ಲೈನಪ್ ಚೆನ್ನಾಗಿದೆ. ಇವರನ್ನ ಕಟ್ಟಿ ಹಾಕಲು ಕೊಹ್ಲಿ ಪಡೆಯ ಚಾಹಲ್, ಸೈನಿ, ಮಾರಿಸ್, ಉದಾನ್ ರೆಡಿಯಾಗಿದ್ದಾರೆ.
ಆರ್ ಸಿಬಿ ತಂಡದಲ್ಲಿನ ಪಿಂಚ್, ಪಡಿಕಲ್, ಎಬಿಡಿ, ಕೊಹ್ಲಿ ಆಟಗಾರರಲ್ಲಿ ಒಂದು ಜೋಡಿ ಭರ್ಜರಿಯಾಗಿ ಬ್ಯಾಟ್ ಬೀಸಿತು ಅಂದ್ರೆ ರಾಯಲ್ಸ್ ಎಷ್ಟೇ ಸ್ಕೋರ್ ನೀಡಿದ್ರೂ ಚೇಸ್ ಮಾಡಬಹುದು. ಇದಕ್ಕೆ ಅರ್ಚರ್, ಶೇಯಸ್ ಗೋಪಾಲ, ತ್ಯಾಗಿ ಹೇಗೆ ಬೌಲಿಂಗ್ ಮಾಡ್ತಾರೆ ಅನ್ನೋದು ಮುಖ್ಯವಾಗಿದೆ.
4ನೇ ಸ್ಥಾನದಲ್ಲಿರುವ ಆರ್ ಸಿಬಿ, 7ನೇ ಸ್ಥಾನದಲ್ಲಿರುವ ಆರ್ ಆರ್ ನಡುವಿನ ಪಂದ್ಯ ಕುತೂಹಲ ಮೂಡಿಸಿದೆ. ಹಿಂದಿನ ಪಂದ್ಯದಲ್ಲಿ ಸೋತಿರುವ ಆರ್ ಸಿಬಿ ಗೆಲ್ಲುವ ತವಕದಲ್ಲಿದೆ. ಕಳೆದ ಪಂದ್ಯದ ಸೋಲಿನ ಸೇಡು ತೀರಿಸಿಕೊಳ್ಳಲು ಆರ್ ಆರ್ ರೆಡಿಯಾಗಿದೆ.