ಪ್ರಜಾಸ್ತ್ರ ಸುದ್ದಿ
ವಿಜಯಪುರ: ಅಕ್ರಮವಾಗಿ ಸಿಲಿಂಡರ್ ಮಾರಾಟ ಮಾಡ್ತಿದ್ದ ಓರ್ವನನ್ನ ನಗರದಲ್ಲಿ ಬಂಧಿಸಲಾಗಿದೆ. ನಗರದ ಇಂಡಿ ಬೈಪಾಸ್ ಬಳಿಯ ಜ್ಯೋತಿ ಫ್ಯಾಕ್ಟರಿಯ ಹಿಂಭಾಗದಲ್ಲಿ ಅಕ್ರಮವಾಗಿ ಸಿಲಿಂಡರ್ ಮಾರಾಟ ಮಾಡ್ತಿರುವುದು ಕಂಡು ಬಂದಿದೆ.
ಕಲ್ಮೇಶ ಚೆನ್ನಪ್ಪ ಆಳೂರ ಬಂಧಿತ ಆರೋಪಿಯಾಗಿದ್ದಾನೆ. ಈತನ ಬಳಿಯಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ 25 ಗೃಹ ಬಳಕೆ ಸಿಲಿಂಡರ್(ಖಾಲಿ), 13 ಕಮರ್ಷಿಯಲ್ ಸಿಲಿಂಡರ್, 21 ಕಮರ್ಷಿಯಲ್ ಖಾಲಿ ಸಿಲಿಂಡರ್ ಹಾಗೂ ತೂಕದ ಯಂತ್ರವನ್ನ ಜಪ್ತಿ ಮಾಡಲಾಗಿದೆ.
ಸುಮಾರು 1 ಲಕ್ಷ 28 ಸಾವಿರ ಮೌಲ್ಯದ ವಸ್ತುಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ವಿಜಯಪುರ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.