ಪ್ರಜಾಸ್ತ್ರ ಕ್ರೀಡಾ ಸುದ್ದಿ
ಕ್ಯಾನಾ ಬೇರಾ: ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಈಗಾಗ್ಲೇ ಎರಡು ಪಂದ್ಯಗಳಲ್ಲಿ ಸೋತು ಸರಣಿ ಕಳೆದುಕೊಂಡಿರುವ ಭಾರತಕ್ಕೆ ಇದು ಗೌರವ ಉಳಿಸಿಕೊಳ್ಳುವ ಪಂದ್ಯವಾಗಿದೆ.
ಹಿಂದಿನ ಎರಡೂ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಬ್ಯಾಟಿಂಗ್, ಬೌಲಿಂಗ್ ನಲ್ಲಿ ಕಮಾಲ್ ಮಾಡಿತ್ತು. ಇವತ್ತು ಭಾರಟ ಟಾಸ್ ಗೆದ್ದ ಬ್ಯಾಟಿಂಗ್ ತೆಗೆದುಕೊಂಡಿದ್ದು ಬೃಹತ್ ರನ್ ಕಲೆ ಹಾಕುತ್ತಾ ಅನ್ನೋ ಕುತೂಹಲವಿದೆ. ನವದೀಪ ಸೈನಿ, ಚಹಲ್, ಶೆಮಿ, ಮಯಾಂಕ ಅಗರ್ವಾಲ್ ಕೈ ಬಿಡಲಾಗಿದೆ.
ಈ ನಾಲ್ವರು ಆಟಗಾರರ ಜಾಗಕ್ಕೆ ನಟರಾಜನ್, ಕುಲದೀಪ ಯಾದವ, ಶಾರ್ದೂಲ್ ಠಾಕೂರ, ಶುಭ್ಮನ್ ಗಿಲ್ ಕಣಕ್ಕೆ ಇಳಿಯುತ್ತಿದ್ದಾರೆ.