‘ಭಾರತದಿಂದ ಸಾಲ ಪಡೆದಿದ್ದೇವೆ, ದೇಣಿಗೆಯಲ್ಲ’

222

ಪ್ರಜಾಸ್ತ್ರ ಅಂತಾರಾಷ್ಟ್ರೀಯ ಸುದ್ದಿ

ಕೊಲಂಬೊ: ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ನೆರೆಯ ಶ್ರೀಲಂಕಾಗೆ ಭಾರತ ಆರ್ಥಿಕ ನೆರವು ನೀಡಿದೆ. ಈ ಬಗ್ಗೆ ಮಾತನಾಡಿರುವ ಶ್ರೀಲಂಕಾ ಪ್ರಧಾನಿ ರಾನಿಲ್ ವಿಕ್ರಂಸಿಂಘೆ, ಭಾರತದಿಂದ ನಾವು ಸಾಲ ಪಡೆದಿದ್ದೇವೆ. ಅದು ದೇಣಿಗೆಯಲ್ಲ. ಅದನ್ನು ಮರುಪಾವತಿಸಬೇಕು ಎಂದಿದ್ದಾರೆ.

ಸಾಲದ ರೂಪದಲ್ಲಿ 31 ಸಾವಿರ ಕೋಟಿ ರೂಪಾಯಿ ನೆರವು ಪಡೆಯಲಾಗಿದೆ. ಭಾರತ ಸದಾ ನಮ್ಮೊಂದಿಗೆ ನಿಲ್ಲಲು ಆಗುವುದಿಲ್ಲ. ನಾವು ಸಹ ಸಾಲಗಳನ್ನು ತೀರಿಸಲು ಯೋಜನೆಗಳನ್ನು ಹಾಕಿಕೊಳ್ಳಬೇಕು ಎಂದಿದ್ದಾರೆ. ಇನ್ನು ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತ್ ನಾಗೇಶ್ವರಾವ್ ನೇತೃತ್ವದ ಸಮಿತಿ ನಾಳೆ ಶ್ರೀಲಂಕಾಗೆ ತೆರಳಿ ಮತ್ತೊಂದು ಸುತ್ತಿನ ಹಣಕಾಸಿನ ನೆರವಿನ ಅಗತ್ಯವಿದೆಯೆ ಅನ್ನೋದರ ಕುರಿತು ಚರ್ಚಿಸಲಿದೆ.




Leave a Reply

Your email address will not be published. Required fields are marked *

error: Content is protected !!