ಶ್ರೀಲಂಕಾ ಬಳಿಕ ಬಾಂಗ್ಲಾದಲ್ಲಿ ರೊಚ್ಚಿಗೆದ್ದ ಜನತೆ

293

ಪ್ರಜಾಸ್ತ್ರ ಅಂತಾರಾಷ್ಟ್ರೀಯ ಸುದ್ದಿ

ಡಾಕಾ: ನೆರೆಯ ಶ್ರೀಲಂಕಾದಲ್ಲಿ ಆರ್ಥಿಕ ದಿವಾಳಿತನದಿಂದಾಗಿ ಬಹುದೊಡ್ಡ ಹೋರಾಟವೇ ನಡೆಯಿತು. ಪ್ರಧಾನಿ, ರಾಷ್ಟ್ರಾಧ್ಯಕ್ಷರು ಪಲಾಯನ ಮಾಡಿದರು. ಇದೀಗ ಇದೆ ಸ್ಥಿತಿ ನೆರೆಯ ಮತ್ತೊಂದು ದೇಶ ಬಾಂಗ್ಲಾದಲ್ಲಿ ಸೃಷ್ಟಿಯಾಗಿದೆ.

ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಶೇಕಡ 50ರಷ್ಟು ಏರಿಕೆ ಮಾಡಿರುವುದನ್ನು ಖಂಡಿಸಿ ದೇಶ್ಯಾದ್ಯಂತ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ. ಹೀಗಾಗಿ ಅದು ಹಿಂಸಾಚಾರಕ್ಕೂ ಮುಟ್ಟಿದೆ. ಅಂತಾರಾಷ್ಟ್ರೀಯ ಬ್ಯಾಂಕ್ ಗಳಿಂದ ಪಡೆದಿರುವ ಸಾಲ ಮರು ಪಾವತಿ ಮಾಡಲು ಹಾಗೂ ಕಳೆದ 6 ತಿಂಗಳಿಂದ ತೈಲ ಕಂಪನಿಗಳು ಅನುಭವಿಸಿರುವ ನಷ್ಟವನ್ನು ಸರಿಪಡಿಸಲು ಇದೊಂದೇ ದಾರಿ ಎಂದು ಇಂಧನ ಸಚಿವರು ಹೇಳಿದ್ದಾರೆ.

ಆದರೆ, ಸಾಮಾನ್ಯ ಜನರ ಬದುಕಿನ ಜೊತೆಗೆ ಆಟವಾಡಲು ಹೊರಟರೆ ಏನಾಗುತ್ತೆ ಅನ್ನೋದಕ್ಕೆ ಶ್ರೀಲಂಕಾ ಜೊತೆಗೆ ಬಾಂಗ್ಲಾ ಪರಿಸ್ಥಿತಿಯೂ ಸೇರಿಕೊಂಡಿದೆ.




Leave a Reply

Your email address will not be published. Required fields are marked *

error: Content is protected !!