ಸೂಪರ್ ಸ್ಟಾರ್ ನಟ ಕಮಲ್ ಹಾಸನ್ ನಟನೆಯ ಇಂಡಿಯನ್-2 ಚಿತ್ರದ ಶೂಟಿಂಗ್ ವೇಳೆ ಬುಧವಾರ ರಾತ್ರಿ ಕ್ರೇನ್ ಉರುಳಿ ಬಿದ್ದು ಮೂವರು ಸಾವನ್ನಪ್ಪಿದ್ರು. ಈ ಬಗ್ಗೆ ತೀವ್ರ ಸಂತಾಪ ಸೂಚಿಸಿರುವ ನಟ ಕಮಲ್ ಹಾಸನ್, ಮೃತರ ಕುಟುಂಬಗಳಿಗೆ ತಲಾ ಒಂದು ಕೋಟಿ ಘೋಷಣೆ ಮಾಡಿದ್ದಾರೆ. ಆದ್ರೆ, ಇದು ಕಳೆದುಕೊಂಡ ಜೀವಗಳಿಗೆ ನೀಡ್ತಿರುವ ಪರಿಹಾರವಲ್ಲ ಅಂತಾ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಮೃತ ಕೃಷ್ಣಾ ನಿರ್ದೇಶಕ ಶಂಕರ ಅವರ ಸಹಾಯ ನಿರ್ದೇಶಕನಾಗಿದ್ದ. ಮಧು ಹಾಗೂ ಚಂದ್ರನ್ ತಾಂತ್ರಿಕ ವರ್ಗದಲ್ಲಿದ್ರು. 12 ಜನ ಗಾಯಗೊಂಡಿದ್ದಾರೆ. ಇವರನ್ನ ಕಿಲ್ಪಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಭೇಟಿ ನೀಡಿದ ನಿರ್ದೇಶಕ ಶಂಕರ, ನಟ ಕಮಲ್ ಹಾಸನ್ ಆರೋಗ್ಯ ವಿಚಾರಿಸಿದ್ರು. ಮೃತರಿಗೆ ಅಂತಿಮ ನಮನ ಸಲ್ಲಿಸಿದ್ರು.
ಸಿನಿಮಾ ರಂಗದ ಹಿರಿಯರ ಜೊತೆ ಮಾತ್ನಾಡಿದ್ದೇನೆ. ಸುರಕ್ಷತೆ ಬಗ್ಗೆ ಹೆಚ್ಚಿನ ಕ್ರಮ ತೆಗೆದುಕೊಳ್ಳಬೇಕಿದೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡ್ತೀವಿ. ಆದರೂ ನಮ್ಗೆ ಸಿಬ್ಬಂದಿಗೆ ಸರಿಯಾದ ರಕ್ಷಣೆ ಕೊಡಲು ಆಗ್ತಿಲ್ಲವಲ್ಲವೆಂದು ನಟ ಕಮಲ್ ಹಾಸನ್ ವಿಷಾದ ವ್ಯಕ್ತಪಡಿಸಿದ್ದಾರೆ.