ಇಂಡಿಯನ್-2 ಮೂವಿ ಸೆಟ್ ದುರಂತ: ಕಮಲ್ ವಿಚಾರಣೆ

494

ಚೆನ್ನೈ: ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಕಮಲ್ ಹಾಸನ್ ಅವರು ಪೊಲೀಸರ ಮುಂದೆ ಇಂದು ಹಾಜರಾಗಿದ್ದಾರೆ. ಇಂಡಿಯನ್-2 ಚಿತ್ರದ ಶೂಟಿಂಗ್ ವೇಳೆ ನಡೆದ ಕ್ರೇನ್ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ರು. ಈ ಸಂಬಂಧ, ಚೆನ್ನೈ ಪೊಲೀಸರ ಮುಂದೆ ನಟ ಕಮಲ್ ಹಾಸನ್ ಹಾಜರಾಗಿದ್ದಾರೆ.

ಈ ಘಟನೆ ನಡೆದಾಗ ನಟ ಕಮಲ್ ಹಾಸನ್ ಸ್ಥಳದಲ್ಲಿ ಇರ್ಲಿಲ್ಲ ಅನ್ನೋದು ತಿಳಿದು ಬಂದಿತ್ತು. ಆದ್ರೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಆರ್.ಶಂಕರ, ನಟ ಕಮಲ ಹಾಸನ್ ಸೇರಿ ಸಿನಿಮಾಗೆ ಸಂಬಂಧಿಸಿದವರ ಮೇಲೆ ಕೇಸ್ ದಾಖಲಾಗಿತ್ತು. ಕಳೆದ ವಾರ ನಿರ್ದೇಶಕ ಆರ್.ಶಂಕರ ವಿಚಾರಣೆ ನಡೆಸಲಾಗಿತ್ತು. ಇಂದು ಕಮಲ್ ಹಾಸನ್ ಹಾಜರಾಗಿದ್ದಾರೆ.

ಇವಿಪಿ ಫಿಲ್ಮ್ ಸಿಟಿಯಲ್ಲಿ ಸೆಟ್ ತಯಾರಿಸಲಾಗಿತ್ತು. ಈ ವೇಳೆ ಕ್ರೇನ್ ಉರುಳಿಬಿದ್ದು ಮೂವರು ಸಾವನ್ನಪ್ಪಿದ್ರು. 9 ಜನ ಗಾಯಗೊಂಡಿದ್ರು. ಘಟನೆ ಸಂಬಂಧ ನಟ ಕಮಲ ಹಾಸನ್ ಮೃತ ಕುಟುಂಬಗಳಿಗೆ ಪರಿಹಾರ ಧನ ಸಹ ಘೋಷಣೆ ಮಾಡಿದ್ರು.




Leave a Reply

Your email address will not be published. Required fields are marked *

error: Content is protected !!