Search

ಪತ್ರಕರ್ತರು ನೀವು ಟೀ ಕುಡಿದು ಟೀಕಿಸಿ ಬರೆಯಿರಿ: ಕಾರ್ಯಪ್ಪ

374

ಮೈಸೂರು: ನಾನು ರಂಗಾಯಣದಲ್ಲಿ ಯಾವುದೇ ಪಕ್ಷದ ಬಾವುಟ ಹಾರಿಸಲು ಬಂದಿಲ್ಲ. ಸಮನ್ವಯತೆ ಸಾಧಿಸಲು ಬಂದಿದ್ದೇನೆ ಎಂದು ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಹೇಳಿದ್ದಾರೆ. ಟಿಪ್ಪು ಒಬ್ಬ ಮತಾಂಧ ಅಂತಾ ಹೇಳಿದ್ದ ವಿಚಾರಕ್ಕೆ ಪ್ರತಿಕ್ರಿಯಿಸಿ ಮಾತ್ನಾಡಿದ ಅವರು, ನಾನು ಸ್ವಲ್ಪ ಒರಟ. ಕೊಡವರ ಮಾತೆ ಹಾಗೇ. ನೀವು ಪತ್ರಕರ್ತರು ಬೇಕಾದರೆ ಟೀ ಕುಡಿದು ನನ್ನನ್ನು ಟೀಕಿಸಿ ಬರೆಯಿರಿ ಎಂದು ಪತ್ರಕರ್ತರಿಗೆ ಟಾಂಟ್ ಕೊಟ್ಟರು.

ನಾನು ಹೇಳಿದ್ದು ಕೊಡವರಿಗೆ ಟಿಪ್ಪು ಮತಾಂಧ. ಮೈಸೂರಿನವರಿಗೆ ಹೆಮ್ಮೆ ಅಂತಾ ಹೇಳಿದ್ರು. ಈ ಬಾರಿಯ ಗಾಂಧಿಯ ಪಥ ಬಹರೂಪಿ ನಾಟಕೋತ್ಸವ ಯಶಸ್ವಿಯಾಗಿದೆ. ಜನರಿಂದ ಒಳ್ಳೆಯ ಅಭಿಪ್ರಾಯ ಬಂದಿದೆ. ಪಂಥಗಳನ್ನ ಮೀರಿ ನಾವು ಗಾಂಧಿ ಕಡೆ ಪಥ ಹಾಕಿದ್ದೇವೆ. ಎಡಪಂಥೀಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ರು ಅಂತಾ ಹೇಳಿದ್ರು. ಟಿಪ್ಪು ಕೊಡಗಿನಲ್ಲಿ 12 ಸಾವಿರ ಜನರನ್ನ ಮತಾಂತರ ಮಾಡಿದ್ದ ಅಂತಾ ಕಾರ್ಯಪ್ಪ ಆರೋಪಿಸಿದ್ದರು. ಇದು ವಿವಾದ ಪಡೆದುಕೊಂಡಿತ್ತು.




Leave a Reply

Your email address will not be published. Required fields are marked *

error: Content is protected !!