ಐಪಿಎಸ್ ಅಧಿಕಾರಿಯನ್ನ ಬೆಳ್ಳಗೆ ಒಂದ್ಕಡೆ.. ಸಂಜೆ ಇನ್ನೊಂದ್ಕಡೆ ವರ್ಗಾವಣೆ

443

ಬೆಂಗಳೂರು: ಆಗ್ನೇಯ ವಿಭಾಗದ ಡಿಸಿಪಿಯಾಗಿದ್ದ ಐಪಿಎಸ್ ಅಧಿಕಾರಿ ಇಶಾ ಪಂತ್ ಅವರನ್ನ ಕಳೆದ ಮೂರು ದಿನಗಳ ಹಿಂದೆಯಷ್ಟೇ ಸಿಐಡಿ ಎಸ್ಪಿಯಾಗಿ ವರ್ಗಾವಣೆ ಮಾಡಿತ್ತು. ಇದನ್ನ ಇಂದು ಬೆಳಗ್ಗೆ ದಿಢೀರ್ ಎಂದು ರದ್ದುಗೊಳಿಸಿ ಇನ್ನೊಂದು ಆದೇಶವನ್ನ ರಾಜ್ಯ ಸರ್ಕಾರ ಹೊರಡಿಸಿದೆ.

ಮೂರು ದಿನಗಳ ಹಿಂದೆಯಷ್ಟೇ ಸಿಐಡಿ ಎಸ್ಪಿಯಾಗಿ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದನ್ನ, ಕ್ಯಾನ್ಸಲ್ ಮಾಡಿ ಸಂಜೆಯೊಳಗೆ ಮತ್ತೊಂದ್ಕಡೆ ವರ್ಗಾವಣೆ ಮಾಡಿದೆ. ಇಶಾ ಪಂತ್ ಅವರನ್ನ ಇದೀಗ ಕಮಾಂಡ್ ಸೆಂಟರ್ ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿದೆ.

ಹೀಗಾಗಿ ಆಗ್ನೇಯ ವಿಭಾಗದ ಡಿಸಿಪಿಯಾಗಿ ಜೋಶಿ ಶ್ರೀನಾಥ ನೇಮಕವಾಗಿದ್ದಾರೆ. ಒಂದೇ ದಿನದಲ್ಲಿ ಎರಡೆರಡು ಕಡೆ ಆದೇಶ ಹೊರಡಿಸಿದ ರಾಜ್ಯ ಸರ್ಕಾರದ ಮೇಲೆ ಅನುಮಾನಗಳು ಮೂಡಿವೆ.




Leave a Reply

Your email address will not be published. Required fields are marked *

error: Content is protected !!