ಪ್ರಜಾಸ್ತ್ರ ಕ್ರೀಡಾ ಸುದ್ದಿ
ನವದೆಹಲಿ: ಮೇ 1ರಂದು ನಡೆದ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಲಖನೌ ತಂಡದ ನಾಯಕ ಕೆ.ಎಲ್ ರಾಹುಲ್ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಗೆ ಉಳಿಯಬೇಕಾಯಿತು. ಅಲ್ಲದೆ ಅವರಿಗೆ ವಿಶ್ವ ಚಾಂಪಿಯನ್ ಶಿಪ್ ಟೂರ್ನಿಯ ಆಟದಿಂದಲೂ ಹೊರಗುಳಿಯುವಂತೆ ಮಾಡಿದೆ.
ಈ ಕುರಿತು ಇಂದು ಬಿಸಿಸಿಐ ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, ಕೆ.ಎಲ್ ರಾಹುಲ್ ಜಾಗಕ್ಕೆ ಮುಂಬೈ ತಂಡದ ಆಟಗಾರ ಇಶಾನ್ ಕಿಶನ್ ಗೆ ಅವಕಾಶ ನೀಡಲಾಗಿದೆ. ಆಸ್ಟ್ರೇಲಿಯಾ ವಿರುದ್ಧ ವಿಶ್ವಚಾಂಪಿಯನ್ ಶಿಪ್ ಫೈನಲ್ ಪಂದ್ಯ ಮುಂದಿನ ತಿಂಗಳು ನಡೆಯಲಿದೆ. ಋತುರಾಜ್ ಗಾಯಕ್ವಾಡ, ಮುಖೇಶ್ ಕುಮಾರ್, ಸೂರ್ಯಕುಮಾರ್ ಯಾದವ್ ಹೆಚ್ಚುವರಿ ಆಟಗಾರರಾಗಿ ಆಯ್ಕೆ ಮಾಡಲಾಗಿದೆ.
14 ಏಕದಿನ ಪಂದ್ಯಗಳನ್ನು ಆಡಿರುವ ಇಶಾನ್ 1 ದ್ವಿಶತಕ, 1 ಶತಕ, 3 ಅರ್ಧ ಶತಕಗಳೊಂದಿಗೆ 510 ರನ್ ಗಳಿಸಿದ್ದಾರೆ. 27 ಟಿ-20 ಪಂದ್ಯಗಳಿಂದ 4 ಅರ್ಧ ಶತಕದೊಂದಿಗೆ 653 ರನ್ ಗಳಿಸಿದ್ದಾರೆ.