ಕಾಂಗ್ರೆಸ್ ನಲ್ಲಿ ತುಕಡೆ ಸಮಸ್ಯೆ ಹೆಚ್ಚು: ಪ್ರಧಾನಿ ಮೋದಿ

93

ಪ್ರಜಾಸ್ತ್ರ ಸುದ್ದಿ

ನಂಜನಗೂಡು: ಚುನಾವಣಾ ಪ್ರಚಾರದ ಕೊನೆಯ ಬಹಿರಂಗ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ನಲ್ಲಿ ತುಕಡೆ ತುಕಡೆ ಸಮಸ್ಯೆ ಹೆಚ್ಚಾಗಿದೆ. ಕಾಂಗ್ರೆಸ್ ದುರಾಡಳಿತದಿಂದ ಕರ್ನಾಟಕ ಸೌರ್ವಭೌಮತ್ವವನ್ನೇ ಪ್ರಶ್ನಿಸುವಂತಾಗಿದೆ. ಭಾರತದಿಂದ ಕರ್ನಾಟಕವನ್ನು ಪ್ರತ್ಯೇಕಿಸಲು ನೋಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಕರ್ನಾಟಕವನ್ನು ನಂಬರ್ 1 ಮಾಡಲು ಡಬಲ್ ಎಂಜಿನ್ ಸರ್ಕಾರ ಕೆಲಸ ಮಾಡುತ್ತಿದೆ. ಕಾಂಗ್ರೆಸ್, ಜೆಡಿಎಸ್ ಸರ್ಕಾರ ಇದ್ದಾಗ ಅಭಿವೃದ್ಧಿ ಕುಂಠಿತವಾಗಿತ್ತು. ದಶಕಗಳ ಹಿಂದೆ ಗರಿಬಿ ಹಠಾವೋ ಗ್ಯಾರೆಂಟಿ ಕಾಂಗ್ರೆಸ್ ನೀಡಿತ್ತು. ಆದರೆ, ಅದು ಸುಳ್ಳಿನ ಕಂತೆಯಾಗಿದೆ ಎಂದರು.

ಮಸಾಲೆ ಪದಾರ್ಥಗಳ ಬೇಡಿಕೆ ಹೆಚ್ಚಿದೆ. ಇದರ ನೇರ ಲಾಭ ಮೈಸೂರಿನ ರೈತರಿಗೆ ಸಿಗಲಿದೆ. ನಂಜನಗೂಡು, ಶ್ರೀರಂಗಪಟ್ಟಣ, ಮೈಸೂರು ಸಾಂಸ್ಕೃತಿ ಪರಂಪರೆ ಹೊಂದಿದೆ. ಆದರೆ, ಇವುಗಳನ್ನು ಕಾಂಗ್ರೆಸ್ ಅವಮಾನ ಮಾಡುತ್ತಿದೆ. ಲಾಭ ನೋಡಿಕೊಂಡು ಕಾಂಗ್ರೆಸ್ ರಾಜಕಾರಣ ಮಾಡುತ್ತದೆ ಎಂದು ಕಿಡಿ ಕಾರಿದರು. ನಂಜುಂಡೇಶ್ವರಸ್ವಾಮಿ ದರ್ಶನ ಪಡೆದರು.




Leave a Reply

Your email address will not be published. Required fields are marked *

error: Content is protected !!