ಬೆಂಗಳೂರು: ರಾಜ್ಯದಲ್ಲಿ ಮಿನಿ ಕದನಕ್ಕೆ ಅಖಾಡ ಸಿದ್ಧವಾಗ್ತಿರುವ ಟೈಂನಲ್ಲಿ ಜೆಡಿಎಸ್ ನಲ್ಲಿ ಭಿನ್ನಮತ ಕಾಣಿಸಿಕೊಂಡಿದೆ. ಹೀಗಾಗಿ ಇಂದು ಜೆಡಿಎಸ್ ನ ಕೆಲವು ಶಾಸಕರು ಸೇರಿ ಸಭೆ ನಡೆಸಲಿದ್ದಾರೆ ಅಂತಾ ಹೇಳಲಾಗ್ತಿದೆ. ಇದರ ನೇತೃತ್ವವನ್ನ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಸುರೇಶ ಬಾಬು, ಗುಬ್ಬಿ ಶ್ರೀನಿವಾಸ ವಹಿಸಿಕೊಂಡಿದ್ದಾರಂತೆ.
ತಮ್ಮಲ್ಲಿನ ಅಸಮಾಧಾನದ ಬಗ್ಗೆ ಜಿಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಅವರ ಬಳಿ ಹೇಳಿದ್ರೂ ಬಗೆಹರಿದಿಲ್ಲ. ಹೀಗಾಗಿ ಹೊರಟ್ಟಿ ನೇತೃತ್ವದಲ್ಲಿ ಸಭೆ ನಡೆಸಿ, ಮುಂದಿನ ತೀರ್ಮಾನ ತೆಗೆದುಕೊಳ್ಳಲು ರೆಡಿಯಾಗಿದ್ದಾರೆ. ಈ ಸಭೆಯಲ್ಲಿ ಪರಿಷತ್ ಸದಸ್ಯರಾದ ಶರವಣ, ಮನೋಹರ, ಮರಿತಿಬ್ಬೆಗೌಡ, ಶಾಸಕ ಗುಬ್ಬಿ ಶ್ರೀನಿವಾಸ, ಮಾಜಿ ಶಾಸಕ ಸುರೇಶ ಬಾಬು ಭಾಗವಹಿಸಲಿದ್ದಾರೆ ಅಂತಾ ಉನ್ನತ ಮೂಲಗಳಿಂದ ತಿಳಿದು ಬಂದಿದೆ.