ಪ್ರಜಾಸ್ತ್ರ ಸುದ್ದಿ
ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಬಿಡದಂತೆ ನಿರಂತರ ಹೋರಾಟಗಳು ನಡೆಯುತ್ತಿವೆ. ಇಲ್ಲೊಬ್ಬ ರೈತ ವಿನೂತನವಾಗಿ ಹೋರಾಟ ಮಾಡುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಉಪ್ಪಾರನಾಯಕನಹಳ್ಳಿಯಲ್ಲಿ ರೈತ ಶಿವಕುಮಾರ್ ಆರಾಧ್ಯ ಗುಂಡಿತೋಡಿಕೊಂಡು ಕುತ್ತಿಗೆವರೆಗೂ ಮಣ್ಣು ಮುಚ್ಚಿಕೊಂಡು ಪ್ರತಿಭಟನೆ ನಡೆಸಿದ್ದಾರೆ.
ತಮಿಳುನಾಡಿಗೆ ನೀರು ಹರಿಸುವ ಮೂಲಕ ನಾಡಿನ ರೈತರನ್ನು ಜೀವಂತ ಸಮಾಧಿ ಮಾಡುತ್ತಿದೆ ಅನ್ನೋದನ್ನು ತೋರಿಸುವ ಸಲುವಾಗಿ ಈ ರೀತಿಯ ವಿನೂತನ ಹೋರಾಟ ನಡೆಸಿದ್ದಾರೆ. ಸರ್ಕಾರದ ವಿರುದ್ಧ ಧಿಕ್ಕಾರ ಕೂಗುವ ಬದಲು ಜೈಕಾರ ಹಾಕಿ ವಿಡಂಬನೆ ಮಾಡಲಾಯಿತು.