ಅರ್ಜುನ ಪ್ರಶಸ್ತಿ ಪಡೆದ ಕಬಡ್ಡಿ ಆಟಗಾರ್ತಿ ಕಷ್ಟಕ್ಕೆ ಕೇವಲ 2 ಲಕ್ಷ ಪರಿಹಾರ

331

ಪ್ರಜಾಸ್ತ್ರ ಕ್ರೀಡಾಸುದ್ದಿ

ಏಷ್ಯಗ್ ಗೇಮ್ಸ್ ನಲ್ಲಿ ಎರಡು ಬಾರಿ ಚಿನ್ನ ಗೆದ್ದ ಕಬಡ್ಡಿ ತಂಡದಲ್ಲಿ ಆಡಿದ ಕನ್ನಡದ ಆಟಗಾರ್ತಿ ತೇಜಸ್ವಿನಿ ಬಾಯಿ ತುಂಬ ಕಷ್ಟದಲ್ಲಿದ್ದಾರೆ. ಕೋವಿಡ್ ನಿಂದಾಗಿ ಪತಿಯನ್ನ ಸಹ ಇತ್ತೀಚೆಗೆ ಕಳೆದುಕೊಂಡಿದ್ದಾರೆ. ಅವರು ಸಹ ಕೋವಿಡ್ ಗೆ ತುತ್ತಾಗಿದ್ದಾರೆ. ಇವರ ಸಾಧನೆಗೆ 2011ರಲ್ಲಿ ಅರ್ಜುನ ಪ್ರಶಸ್ತಿ ನೀಡಲಾಗಿದೆ.

ಮೇ 11ರಂದು ಪತಿಯನ್ನ ಕಳೆದುಕೊಂಡಿರುವ ಆಟಗಾರ್ತಿ ಸಧ್ಯ ಕಷ್ಟದಲ್ಲಿದ್ದಾರೆ. ಇವರಿಗೆ ಪಂಡಿತ ದೀನ್ ದಿಯಾಳ್ ಉಪಾದ್ಯಾಯ ನ್ಯಾಷನಲ್ ವೆಲ್ಫೇರ್ 2 ಲಕ್ಷ ರೂಪಾಯಿ ನೆರವು ನೀಡಿದೆ. ಇದೀಗ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸಹ 2 ಲಕ್ಷ ರೂಪಾಯಿ ನೆರವು ಘೋಷಿಸಿದ್ದಾರೆ.

ಗಂಡನನ್ನ ಕಳೆದುಕೊಂಡಿರುವ ತೇಜಸ್ವಿನಿ ಬಾಯಿಗೆ 5 ತಿಂಗಳ ಮಗುವಿದೆ. ಅದರ ಭವಿಷ್ಯದ ಜೊತೆಗೆ ಅವರ ಬದುಕು ಸಹ ಸಾಗಬೇಕಿದೆ. ದೇಶದ ಕೀರ್ತಿಯನ್ನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗುವಲ್ಲಿ ಪ್ರಮುಖ ಪಾತ್ರ ವಹಿಸಿದ ಕನ್ನಡದ ಆಟಗಾರ್ತಿಗೆ ಕೇವಲ 2 ಲಕ್ಷ ಘೋಷಣೆ ಎಷ್ಟು ಸರಿ ಅನ್ನೋ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆದಿದೆ.




Leave a Reply

Your email address will not be published. Required fields are marked *

error: Content is protected !!