ಬೆಂಗಳೂರು: ಹಲವು ವಿಶೇಷಗಳಿಗೆ ಖ್ಯಾತಿಯನ್ನ ಗಳಸಿರುವ ಸಿಲಿಕಾನ್ ಸಿಟಿ, ಕಡಲೆಕಾಯಿ ಪರಿಷೆಯಲ್ಲಿಯೂ ವಿಶೇಷತೆಯನ್ನ ಹೊಂದಿದೆ. ಬಸವನಗುಡಿಯಲ್ಲಿ ನಡೆಯುವ ಸಾಂಪ್ರದಾಯಿಕ ಕಡಲೆಕಾಯಿ ಪರಿಷೆ ಎಲ್ಲರನ್ನ ಸೆಳೆಯುತ್ತೆ. ಇದಕ್ಕೆ ಇಂದು ಚಾಲನೆ ಸಿಗಲಿದೆ.
ಕಾರ್ತಿಕ ಮಾಸದ ಕೊನೆಯ ಸೋಮವಾರ ಕಡಲೆಕಾಯಿ ಪರಿಷೆ ನಡೆಯುತ್ತೆ. ಇಲ್ಲಿರುವ ದೊಡ್ಡಬಸವ ಹಾಗೂ ದೊಡ್ಡ ಗಣೇಶನಿಗೆ ಕಡಲೆಕಾಯಿ ಪೂಜೆ ನಡೆಯುತ್ತೆ. ಇದನ್ನ ಭಕ್ತರಿಗೆ ಪ್ರಸಾದವಾಗಿ ನೀಡಲಾಗುತ್ತೆ. ಬಳಿಕ ಜಾತ್ರೆಯ ಕಳೆಕಟ್ಟುತ್ತೆ. ರಾಜ್ಯದ ನಾನಾ ಭಾಗದ ರೈತರು ಸೇರಿದಂತೆ ಸುತ್ತಲಿನ ತಮಿಳುನಾಡು, ಆಂಧ್ರ ಹಾಗೂ ಕೇರಳದಿಂದ ಸಹ ರೈತರು ಬಂದು ಕಡಲೆಕಾಯಿ ಮಾರಾಟ ಮಾಡುತ್ತಾರೆ. ಎಲ್ಲಿ ನೋಡಿದ್ರೂ ಕಡಲೆಕಾಯಿ ರಾಶಿ ಕಾಣಿಸುತ್ತೆ.
ಕಡಲೆಕಾಯಿ ಪರಿಷೆ ಜೊತೆಗೆ ಮಕ್ಕಳ ಆಟಿಕೆ ಸಾಮಾನು, ಬಟ್ಟೆಗಳು, ಆಭರಣಗಳು ಸೇರಿದಂತೆ ವಿವಿಧ ತಿನಿಸುಗಳಿಗೆ ಸಾಕ್ಷಿಯಾಗುತ್ತೆ. ಹೀಗಾಗಿ ವಿವಿಧ ಸ್ವಾದದ ತಿನಿಸುಗಳನ್ನು ತಿನ್ನಲು ಸಿಲಿಕಾನ್ ಸಿಟಿಯ ಜನ ಬಸವನಗುಡಿಗೆ ಆಗಮಿಸ್ತಾರೆ. ಕಡಲೆಕಾಯಿ ಪರಿಷೆ ಹಿಂದೆ ಬಹುದೊಡ್ಡ ಕಥೆಯಿದೆ. ಹಳ್ಳಿಯ ಜಾತ್ರೆಯ ಸೊಗಡನ್ನ ಒಂದಿಷ್ಟು ಸವಿಯಬಹುದು.