ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ನಗರದ ಐತಿಹಾಸಿಕ ಬಸವನಗುಡಿಯ ಕಡಲೆಕಾಯಿ ಪರಿಷೆಗೆ ಬಿಬಿಎಂಪಿ ದಿನಾಂಕ ನಿಗದಿ ಮಾಡಿ ಗ್ರೀನ್ ಸಿಗ್ನಲ್ ನೀಡಿದೆ. ಕೋವಿಡ್ ಕಾರಣಕ್ಕೆ ಕಳೆದ ಬಾರಿ ಪ್ರಸಿದ್ಧ ದೊಡ್ಡ ಗಣಪತಿ ದೇವಸ್ಥಾನದೊಳಗೆ ಮಾತ್ರ ಪೂಜೆ ನಡೆಸಲಾಗಿತ್ತು. ಈ ಬಾರಿ ಪರಿಷೆಗೆ ಒಪ್ಪಿಗೆ ನೀಡಲಾಗಿದೆ.
ನವೆಂಬರ್ 29ರಿಂದ ಮೂರು ದಿನಗಳ ಕಾಲ ಕಡಲೆಕಾಯಿ ಪರಿಷೆ ನಡೆಯಲಿದೆ. ಕಾರ್ತಿಕ ಮಾಸದ ಕೊನೆಯ ಸೋಮವಾರ ಪರಿಷೆಗೆ ಚಾಲನೆ ಸಿಗಲಿದೆ. ಮೂರು ದಿನಗಳೆಂದು ಹೇಳಿದರೂ ಒಂದು ವಾರ ಕಾಲ ಜಾತ್ರೆಯಂತೆ ಪರಿಷತೆ ನಡೆಯುತ್ತೆ. ಬೆಂಗಳೂರಿನ ಸುತ್ತಮುತ್ತಲಿನ ಹಳ್ಳಿಯ, ಜಿಲ್ಲೆಯ, ತಾಲೂಕಿನ ರೈತರು ಬಂದು ಕಡಲೆಕಾಯಿ ಮಾರುತ್ತಾರೆ.
ಕಡಲೆಕಾಯಿ ಪರಿಷೆ ಹಿನ್ನೆಲೆ
ಐತಿಹಾಸಿಕವಾಗಿ ಬಸವನಗುಡಿ ಅನ್ನೋದು ಮೊದಲು ಒಂದು ಹಳ್ಳಿ. ಇಲ್ಲಿನ ರೈತರು ಹೆಚ್ಚಾಗಿ ಕಡಲೆಕಾಯಿ ಬೆಳೆಯುತ್ತಿದ್ದರು. ಆದರೆ, ಬಸವ ಬಂದು ತಿಂದು ಹಾಳು ಮಾಡುತ್ತಿದ್ದ. ಇದರಿಂದ ಚಿಂತೆಗಿಡಾದ ರೈತರು ಹೊಡೆಯಲು ಹೋದಾಗ ಕಲಾಗಿ ಹೋದ. ಆಗ ಜನರು ತಮ್ಮ ಬೆಳೆಯನ್ನು ಕಟಾವು ಮಾಡಿದ ನಂತರ ಮಾರಾಟಕ್ಕೂ ಮೊದಲು ಇಲ್ಲಿಗೆ ಬಂದು ಪೂಜೆ ಸಲ್ಲಿಸಲು ಶುರು ಮಾಡಿದರು.
ಆ ಕಲ್ಲಿನ ಬಸವ ಬೆಳೆಯುತ್ತಾ ಬಂದು ಇಂದು ಬೃಹತ್ ಮೂರ್ತಿಯಾಗಿ ನಿಂತಿದ್ದು, ಅದೆ ಬುಲ್ ಟೆಂಪಲ್ ಎಂದು ಪ್ರಸಿದ್ಧಿ ಪಡೆದಿದೆ ಅಂತಾರೆ. ಹೀಗಾಗಿ ಪ್ರತಿ ವರ್ಷ ಇಲ್ಲಿ ಕಡಲೆಕಾಯಿ ಪೂಜೆ ನಡೆಯುತ್ತೆ. ಅದು ಬರು ಬರುತ್ತಾ ಪರಿಷೆಯಾಗಿ ಬದಲಾಯಿತು.