ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ನಡೆದ ಕ್ಷಿಪ್ರ ಕಾರ್ಯಪಡೆಯ ತರಬೇತಿ ಕೇಂದ್ರದ ಭೂಮಿ ಪೂಜೆ ವೇಳೆ ಕನ್ನಡ ನಾಮಫಲಕ ಬಳಸದೆ ಅವಮಾನ ಮಾಡಲಾಗಿದೆ. ಅಲ್ದೇ, ತ್ರಿಭಾಷಾ ಸೂತ್ರವನ್ನ ಸಹ ಉಲ್ಲಂಘಿಸಲಾಗಿದೆ. ಇದರ ವಿರುದ್ಧ ನಾಡಿನ ತುಂಬಾ ಆಕ್ರೋಶ ವ್ಯಕ್ತವಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಟ್ರೆಂಡ್ ಆಗಿದೆ. ಇಷ್ಟೆಲ್ಲ ಆದ್ಮೇಲೆ ಎಚ್ಚೆತ್ತುಕೊಂಡಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ತ್ರಿಭಾಷಾ ಸೂತ್ರವನ್ನ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಟ್ವೀಟರ್ ಮೂಲಕ ಕೇಳಿಕೊಳ್ಳಲಾಗಿದೆ.