ಗುಮ್ಮಟನಗರಿಯ ಕಲಾವಿದನಿಗೆ ಜಾನಪದ ಅಕಾಡಮಿ ಪ್ರಶಸ್ತಿ

268

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಈ ಬಾರಿಯ ಜಾನಪದ ಅಕಾಡಮಿ ಪ್ರಶಸ್ತಿಗೆ ಜಿಲ್ಲೆಯ ಡೊಳ್ಳಿನ ಪದಗಳ ಹಾಡುಗಾರ ಆಯ್ಕೆ ಆಗಿದ್ದಾರೆ. ಜಾನಪದ ಕಲಾವಿದ ಸುರೇಶ ಜೋಶಿ ನಿಡೋಣಿ ಅವರಿಗೆ ಸಂದಿದೆ.

ಬಬಲೇಶ್ವರ ತಾಲೂಕಿನ ನಿಡೋಣಿ ಗ್ರಾಮದ ಜಾನಪದ ಕಲಾವಿದ ಸುರೇಶ ಜೋಶಿ ನಿಡೋಣಿ, ಕಳೆದ 40 ವರ್ಷಗಳಿಂದ ಡೊಳ್ಳಿನ ಪದಗಳನ್ನ ಹಾಡಿಕೊಂಡು ಬರುತ್ತಿದ್ದಾರೆ. ಅವರಿಗೆ 2020ನೇ ಸಾಲಿನ ಜಾನಪದ ಅಕಾಡಮಿ ಪ್ರಶಸ್ತಿ ದೊರೆತಿದೆ.

ಇನ್ನು ಈ ಬಾರಿ ಪ್ರಶಸ್ತಿ ಪ್ರದಾನ ಸಮಾರಂಭ ಚಾಮರಾಜನಗರದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಜಾನಪದ ಅಕಾಡಮಿ ಅಧ್ಯಕ್ಷ ಜೋಗತಿ ಮಂಜಮ್ಮ ಅವರು ತಿಳಿಸಿದ್ದು, ಫೆಬ್ರವರಿಯಲ್ಲಿ ಕಾರ್ಯಕ್ರಮ ಮಾಡಬೇಕು ಎಂದುಕೊಂಡಿದ್ದೇವೆ. ಆದ್ರೆ, ದಿನಾಂಕ ಇನ್ನು ಅಂತಿಮವಾಗಿಲ್ಲವೆಂದು ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!