ಪ್ರಶಸ್ತಿಗೆ ಕ.ಕ ಲೇಖಕರ ಕೃತಿಗಳ ಆಹ್ವಾನ

497

ಪ್ರಜಾಸ್ತ್ರ ಸುದ್ದಿ

ಕಲಬುರಗಿ: ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಲೇಖಕರ ಕೃತಿಗಳನ್ನ ಪ್ರಶಸ್ತಿಗೆ ಆಹ್ವಾನಿಸಲಾಗಿದೆ. ಕಲಬುರಗಿ, ಯಾದಗಿರಿ, ಬೀದರ, ಕೊಪ್ಪಳ ಹಾಗೂ ರಾಯಚೂರು ಭಾಗದ ಲೇಖಕರ ಪುಸ್ತಕಗಳನ್ನ, ಗುಲಬರ್ಗಾ ವಿಶ್ವವಿದ್ಯಾಲಯ ಆಹ್ವಾನಿಸಿದೆ.

ಗೌರವಧನ ಪ್ರಶಸ್ತಿಗೆ ಕೃತಿಗಳನ್ನ ಕಳಿಸುವ ಲೇಖಕರು ಕನಿಷ್ಠ 5 ವರ್ಷ ಈ ಭಾಗದಲ್ಲಿ ವಾಸವಾಗಿರಬೇಕು. ಕೃತಿ ಕನಿಷ್ಟ 100 ಪುಟ ಇರಬೇಕು. ಕವನ ಸಂಕಲನವಾಗಿದ್ದರೆ 70 ಪುಟವಿರಬೇಕು. ಲೇಖನಗಳ ಸಂಪಾದನೆ, ಪಿ.ಹೆಚ್.ಡಿ ಪ್ರಬಂಧ ಸ್ವೀಕರಿಸುವುದಿಲ್ಲ ಎಂದಿದ್ದಾರೆ.

5 ಕನ್ನಡ ಕೃತಿಗಳು ಸೇರಿದಂತೆ ಇಂಗ್ಲಿಷ್, ಹಿಂದಿ, ಉರ್ದು, ಮರಾಠಿ, ತೆಲುಗು, ಅನುವಾದ, ಕನ್ನಡ ಜಾನಪದ ಹಾಗೂ ಸಮಾಜ ವಿಜ್ಞಾನ ಸೇರಿದಂತೆ 13 ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುವುದು. 2019 ಜನವರಿಯಿಂದ ಡಿಸೆಂಬರ್ 31 2019ರೊಳಗೆ ಪ್ರಕಟಗೊಂಡ ಕೃತಿಗಳ 5 ಪ್ರತಿಗಳನ್ನು ಆಗಸ್ಟ್ 20ರೊಳಗೆ ಕಳಿಸಬೇಕು ಎಂದು ತಿಳಿಸಲಾಗಿದೆ.

ವಿಳಾಸ: ನಿರ್ದೇಶಕರು, ಪ್ರಸಾರರಂಗ, ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ. 9880088643ಗೆ ಸಂಪರ್ಕಿಸಬಹುದು.




Leave a Reply

Your email address will not be published. Required fields are marked *

error: Content is protected !!