ಪ್ರಜಾಸ್ತ್ರ ಸುದ್ದಿ
ಸಿಂದಗಿ: ತಾಲೂಕು ಆಡಳಿತ ವತಿಯಿಂದ 67ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಗಿದೆ. ಆದರೆ, ಈ ಬಗ್ಗೆ ಮಾಧ್ಯಮದವರಿಗೆ ಸರಿಯಾಗಿ ಆಹ್ವಾನ ಪತ್ರಿಕೆಯನ್ನೇ ನೀಡಿಲ್ಲ. ಕನ್ನಡದ ಕೆಲವು ಪ್ರಮುಖ ದಿನಪತ್ರಿಕೆ ಹಾಗೂ ಆನ್ಲೈನ್ ಪತ್ರಿಕೆಗಳ ವರದಿಗಾರರಿಗೆ ಆಹ್ವಾನ ನೀಡದೆ ಕಡೆಗಣಿಸಲಾಗಿದೆ.
ತಾಲೂಕು ಆಡಳಿತದಿಂದ ಆಚರಿಸುವ ಜಯಂತಿ, ಸಭೆ, ಸಮಾರಂಭಗಳ ಕುರಿತು ತಾಲೂಕಿನ ಮಾಧ್ಯಮದವರಿಗೆ ಸರಿಯಾಗಿ ಮಾಹಿತಿ ತಲುಪುತ್ತಿಲ್ಲ ಅನ್ನೋದು ಪದೆಪದೆ ಕೇಳಿ ಬರುತ್ತಿದೆ. ಈಗ ನಾಡಹಬ್ಬದ ಸಂದರ್ಭದಲ್ಲಿಯೂ ಎಲ್ಲ ಮಾಧ್ಯಮದವರಿಗೆ ಆಹ್ವಾನ ನೀಡದೆ ಇರೋದು ತಾಲೂಕು ಆಡಳಿತ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ.