ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನವೆಂಬರ್ ತಿಂಗಳು ಪೂರ್ತಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಮಾಡಿಕೊಂಡು ಬರಲಾಗುತ್ತೆ. ಒಂದೊಂದು ಕಡೆ ಒಂದೊಂದು ಸಂಘಟನೆ, ಸಂಸ್ಥೆಗಳು ಕಾರ್ಯಕ್ರಮ ಮಾಡಿಕೊಂಡು ಬರುತ್ತವೆ. ಹೀಗೆ ಮಾಡುವ ಕಾರ್ಯಕ್ರಮಗಳಲ್ಲಿ ಕೆಲವರಿಗೆ ಕನ್ನಡ ಸಹ ಸರಿಯಾಗಿ ಬರೆಯಲು ಬರುವುದಿಲ್ಲ. ಇದಕ್ಕೆ ಇಲ್ಲೊಂದು ಉದಾಹರಣೆ ಇದೆ ನೋಡಿ.
ಕಳೆದ ಭಾನುವಾರ ಜಯನಗರದ 8ನೇ ಬಡಾವಣೆಯಲ್ಲಿ ಓಂ ಕನ್ನಡ ಮರಿಯಮ್ಮನ ಕರುನಾಡು ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಮಾಡಲಾಗಿದೆ. ಇದಕ್ಕಾಗಿ ಫ್ಲೆಕ್ಸ್, ಬ್ಯಾನರ್ ಹಾಕಲಾಗಿದೆ. ಅಲ್ಲಿ ಶಾಸಕಿ ಸೌಮ್ಯ ರೆಡ್ಡಿ ಫೋಟೋ ಇದೆ. ವಿಷ್ಯ ಏನಪ್ಪ ಅಂದ್ರೆ, ಅಲ್ಲಿ ಬಳಸಿರುವ ಸಾಲುಗಳು ಹಾಗೂ ಮಾಯವಾಗಿರುವ ಭುವನೇಶ್ವರಿ ಫೋಟೋ.
ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ ಸಾಲುಗಳನ್ನ ತಪ್ಪಾಗಿ ಬರೆಯಲಾಗಿದೆ. ಕರ್ನಾಟಕ ಹೃದಯ ಶಿವ ಜಾಗದಲ್ಲಿ ಯೇಸು ಎಂದು ಬರೆಯಲಾಗಿದೆ. ಬ್ಯಾನರ್ ತುಂಬಾ ತಪ್ಪು ತಪ್ಪಾದ ಸಾಲುಗಳು ತುಂಬಿಕೊಂಡಿದ್ದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.