ಪ್ರಜಾಸ್ತ್ರ ಸುದ್ದಿ
ಸಿಂದಗಿ: ತಾಲೂಕಿನ ಕನ್ನೊಳ್ಳಿ ಗ್ರಾಮದ ಭಾಗ್ಯವಂತಿದೇವಿ ಜಾತ್ರೆ ಶುಕ್ರವಾರ ಸಂಪನ್ನವಾಯಿತು. ಕಳೆದು ಐದು ದಿನಗಳ ಕಾಲ ನಡೆದ ಜಾತ್ರೆ, ಇಂದು ಭರ್ಜರಿಯಾಗಿ ತೆರೆ ಬಿತ್ತು. ಈ ವೇಳೆ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.
ಕಳೆದ ಸೋಮವಾರ ಶುರುವಾಗಿದ್ದ ಜಾತ್ರೆ ಇಂದು ಮುಕ್ತಾಯಗೊಂಡಿತು. ದೇವಸ್ಥಾನದಿಂದ ನಡೂರು ಲಕ್ಷ್ಮಿ ದೇವಸ್ಥಾನದ ಹತ್ತಿರ ಬೃಹತ್ ತೇರು ಮೂಲಕ ದೇವಿಯನ್ನು ಕರೆದುಕೊಂಡು ಬರಲಾಗಿತ್ತು. ಇಲ್ಲಿ ಐದು ದಿನಗಳ ಕಾಲ ಪೂಜೆ ಸಲ್ಲಿಸಲಾಯಿತು. ಇಂದು ಅದ್ಧೂರಿಯಾಗಿ ಕಳುಹಿಸಿಕೊಡಲಾಯಿತು. ಮತ್ತೆ ಮೂರು ವರ್ಷಗಳ ನಂತರ ಜಾತ್ರೆ ನಡೆಯಲಿದೆ.