ಪ್ರಜಾಸ್ತ್ರ ಸಿನಿಮಾ ಡೆಸ್ಕ್
ನಟ ಸುಶಾಂತ ಸಿಂಗ್ ರಜಪೂತ್ ಸಾವಿನ ಬಳಿಕ ಬಾಲಿವುಡ್ ನಲ್ಲಿ ಸ್ವಜಪಕ್ಷಪಾತ ವಿಷಯ ಭರ್ಜರಿ ಚರ್ಚೆಯಾಗ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ನಿರ್ದೇಶಕ ಕರಣ್ ಜೋಹರ್, ಸಲ್ಮಾನ್ ಖಾನ್, ಏಕ್ತಾ ಕಪೂರ್ ಸೇರಿದಂತೆ ಅನೇಕರ ವಿರುದ್ಧ ಸಿಟ್ಟನ್ನ ಹೊರ ಹಾಕಲಾಯಿತು. ಕೇಸ್ ಸಹ ಮಾಡಲಾಗಿದೆ.
ಅದರಲ್ಲೂ ಕರಣ್ ಜೋಹರ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪ್ರತಿ ಸಾರಿ ಅವಹೇಳನ ಮಾಡಲು ಸುಶಾಂತ ಸಿಂಗ್ ರಜಪೂತ್ ಹೆಸರನ್ನ ಬಳಕೆ ಮಾಡ್ತಿದ್ದ. ಸ್ಟಾರ್ ಮಕ್ಕಳಿಗೆ ಮಾತ್ರ ಸಿನಿಮಾ ಮಾಡಿ ಹೊಸಬರ ಕಾಲೆಳೆಯುತ್ತಿದ್ದ ಎಂದು ಕಿಡಿ ಕಾರಲಾಗಿದೆ. ಈ ವೇಳೆ ಜೋಹರ್ ಪರ ಬಿಟೌನ್ ಮಂದಿ ನಿಂತಿಲ್ಲವೆಂದು ಬೇಸರ ಮಾಡಿಕೊಂಡಿದ್ದಾರಂತೆ.
ಟ್ರೋಲ್ ನಿಂದ ಕಂಗಾಲಾಗಿರುವ ಕರಣ್ ಜೋಹರ್, ಮಾಮಿ(ಮುಂಬೈ ಫಿಲ್ಮ್ ಫೆಸ್ಟಿವಲ್) ಮಂಡಳಿಯ ನಿರ್ದೇಶಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗ್ತಿದೆ. ಇದರ ಜೊತೆಗೆ ಮುಂಬೈ ಅಕಾಡಮಿ ಆಫ್ ಮೂವಿಂಗ್ ಇಮೇಜ್ ಮಂಡಳಿ ಸದಸ್ಯನ ಸ್ಥಾನಕ್ಕೂ ಸಹ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಹೇಳಲಾಗ್ತಿದೆ. ಏನು ಮಾಡಿದ್ರೇನು, ಕರಣ್ ಜೋಹರ್ ಮೇಲಿರುವ ಸಿಟ್ಟು ಮಾತ್ರ ಕಡಿಮೆಯಾಗುವ ಸಾಧ್ಯತೆಯಿಲ್ಲ.