ವಿಜಯಪುರದಲ್ಲಿ ಒತ್ತುವರಿ ಜಾಗ ತೆರವು

357

ಪ್ರಜಾಸ್ತ್ರ ಸುದ್ದಿ

ವಿಜಯಪುರ: ನಗರದಲ್ಲಿ ಇಂದು ಜೆಸಿಬಿ ಘರ್ಜಿಸಿದೆ. ಅತಿಕ್ರಮಣ ಮಾಡಿಕೊಂಡಿದ್ದ ಸರ್ಕಾರಿ ಜಾಗವನ್ನ ತೆರವು ಮಾಡಲಾಗಿದೆ. ನಗರದ ಟಿಪ್ಪು ಸುಲ್ತಾನ್ ಸರ್ಕಲ್ ಬಳಿಯ ಜಾಗವನ್ನ ಒತ್ತುವರಿ ಮಾಡಿಕೊಂಡು, ಹೋಟಲೆ ನಿರ್ಮಿಸಲಾಗಿತ್ತು.

ಅಕ್ರಮವಾಗಿ ಹೊಟೇಲ್ ಕಟ್ಟಿಕೊಂಡಿದ್ದ ವ್ಯಕ್ತಿ, ಸರ್ಕಾರಿ ಜಾಗ ತೆರವುಗೊಳಿಸದೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ. ಕೋರ್ಟ್ ತೀರ್ಪು ಸರ್ಕಾರದ ಪರವಾಗಿ ಬಂದಿದ್ರೂ, ಜಾಗ ತೆರವುಗೊಳಿಸಿರ್ಲಿಲ್ಲ. ಹೀಗಾಗಿ ಇಂದು, ಹೆಚ್ಚುವರಿ ಜಿಲ್ಲಾಧಿಕಾರಿ ಔದ್ರಾಮ್ ಹಾಗೂ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ ನೇತೃತ್ವದಲ್ಲಿ ಹೋಟೆಲ್ ತೆರವುಗೊಳಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!