ಕರ್ನಾಟಕ ಮಹಾರಾಷ್ಟ್ರ ಬಸ್ ಸಂಚಾರ ಬಂದ್

638

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಶಿವಸೇನೆ ಪುಂಡಾಟಿಕೆ ಮುಂದುವರೆಸಿದೆ. ಕೊಲ್ಹಾಪುರದಲ್ಲಿ ಕನ್ನಡದ ನಾಮಫಲಕಗಳಿಗೆ ಮಸಿ ಬಳಿದಿದ್ದಾರೆ. ಇದನ್ನ ಖಂಡಿಸಿ ಕನ್ನಡಪರ ಸಂಘಟನೆಗಳು ಬೆಳಗಾವಿಯಲ್ಲಿ ಮರಾಠಿ ನಾಮಫಲಕಗಳಿಗೆ ಮಸಿ ಬಳಿದಿದ್ದಾರೆ.

ಹೀಗೆ ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿ ವಿಚಾರದಲ್ಲಿ ಶಿವಸೇನೆ ಸುಖಾಸುಮ್ಮನೆ ಕ್ಯಾತೆ ತೆಗೆಯುತ್ತಿದೆ. ಈಗ ಅದು ಬರೀ ಸಂಘಟನೆಯಲ್ಲ. ಆಡಳಿತ ಪಕ್ಷವಾಗಿದ್ದು ಸಿಎಂ ಸಹ ಇದ್ದಾರೆ. ಇದನ್ನು ಮರೆತು ಪುಂಡಾಟಿಕೆ ನಡೆಸ್ತಿದ್ದಾರೆ. ಹೀಗಾಗಿ ಎರಡು ಕಡೆ ಬಸ್ ಗಳಿಗೆ ಕಲ್ಲು ತೂರಾಟ ನಡೆಸಲಾಗಿದೆ. ಹೀಗಾಗಿ ಬಸ್ ಸಂಚಾರವನ್ನ ಸಧ್ಯಕ್ಕೆ ಬಂದ್ ಮಾಡಲಾಗಿದೆ.




Leave a Reply

Your email address will not be published. Required fields are marked *

error: Content is protected !!