‘ಕೆಜಿಎಫ್’ ಫ್ಯಾಕ್ಟರಿಯಿಂದ ಒಬ್ಬರು ಔಟ್

325

ಸೌಥ್ ಸಿನಿ ದುನಿಯಾ ಮಾತ್ರವಲ್ಲ ಪ್ಯಾನ್ ಇಂಡಿಯಾ ಸಿನಿಮಾವಾಗಿ ಬ್ಲಾಕ್ ಬ್ಲಸ್ಟರ್ ಸಕ್ಸಸ್ ಕಂಡ ಮೂವಿ ಕೆಜಿಎಫ್. ಇದೀಗ ಚಾಪ್ಟರ್ 2 ರೆಡಿಯಾಗ್ತಿದೆ. ಹೀಗಿರುವ ಹೊತ್ತಿನಲ್ಲಿ ಕೆಜಿಎಫ್ ಫ್ಯಾಕ್ಟರಿಯಿಂದ ಒಬ್ಬರು ಹೊರ ಬಂದಿದ್ದಾರೆ. ನಿರ್ದೇಶಕ ಪ್ರಶಾಂತ ನೀಲ್ ಜೊತೆ ಉಗ್ರಂ, ಕೆಜಿಎಫ್ 1 ಚಿತ್ರಗಳಲ್ಲಿ ಕೆಲಸ ಮಾಡಿದ ಅನುಭವಿ ವ್ಯಕ್ತಿಯೊಬ್ಬರು ಹೊರ ಬಂದಿದ್ದಾರೆ.

ಹೀಗೆ ದಿಢೀರ್ ಎಂದು ಚಿತ್ರದಿಂದ ಹೊರ ಬಂದವರು ಮತ್ಯಾರೂ ಅಲ್ಲ. ಸಂಕಲನಕಾರ ಶ್ರೀಕಾಂತ. ಎಡಿಟರ್ ಶ್ರೀಕಾಂತ ಕೆಜಿಎಫ್ ಚಿತ್ರ ತಂಡದಿಂದ ಹೊರ ಬಂದಿರುವುದು ಸಾಕಷ್ಟು ಅನುಮಾನಗಳನ್ನ ಮೂಡಿಸಿದೆ. ಎರಡು ಸೂಪರ್ ಹಿಟ್ ಚಿತ್ರಗಳನ್ನ ನೀಡಿರುವ ಜೋಡಿ ನಡುವೆ ಅದೇನಾಗಿದೆ ಅನ್ನೋದು ಯಾರಿಗೂ ಗೊತ್ತಿಲ್ಲ. ಬಟ್, ಅನುಭವಿ ಎಡಿಟರ್ ಶ್ರೀಕಾಂತ ಆಚೆ ಬಂದಿದ್ದಾರೆ.

ಶ್ರೀಕಾಂತ ಜಾಗಕ್ಕೆ ಇವರ ಶಿಷ್ಯ ಉಜ್ವಲಗೌಡ ಎಂಟ್ರಿಯಾಗಿದ್ದಾರೆ. ನಿರ್ದೇಶಕ ಪ್ರಶಾಂತ ನೀಲ್ ಉಜ್ವಲಗೌಡ ಅವರ ಎಡಿಟಿಂಗ್ ಕೆಲಸ ಮೆಚ್ಚಿಕೊಂಡು ಗುರುವಿನ ಜಾಗಕ್ಕೆ ಕರೆದುಕೊಂಡು ಬಂದಿದ್ದಾರೆ. ಈ ಮೂಲಕ ಕೆಜಿಎಫ್-2 ಟೀಂಗೆ ಹೊಸ ಪ್ರತಿಭೆ ಸೇರ್ಪಡೆಯಾಗಿದೆ. ಎಡಿಟರ್ ಶ್ರೀಕಾಂತ ಯಾಕೆ ಔಟ್ ಆದ್ರು ಅನ್ನೋ ಕುತೂಹಲ ಮಾತ್ರವಿದೆ.




Leave a Reply

Your email address will not be published. Required fields are marked *

error: Content is protected !!