ತಂದೆ, ಮಗನನ್ನ ಗೆಲ್ಲಿಸಿಕೊಳ್ಳದವರು…

514

ಅಥಣಿ: ತಂದೆ ಹಾಗೂ ಮಗನನ್ನು ಗೆಲ್ಲಿಸಿಕೊಳ್ಳಲು ಆಗದವರು ಬಿಜೆಪಿಯನ್ನ ಸೋಲಿಸ್ತಾರಾ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಸಚಿವ ಕೆ.ಎಸ್ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ. ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸುತ್ತೇವೆ ಎಂದು ಹೇಳಿದ ಕುಮಾರಸ್ವಾಮಿ ಮಾತಿಗೆ ಈ ರೀತಿ ಕುಟುಕಿದ್ದಾರೆ.

ಅಥಣಿಯಲ್ಲಿ ಪ್ರಚಾರದ ವೇಳೆ ಮಾತ್ನಾಡಿದ ಪಂಚಾಯತ್ ರಾಜ್ಯ ಖಾತೆ ಸಚಿವ ಕೆ.ಎಸ್ ಈಶ್ವರಪ್ಪ, ತಂದೆ ಮಾಜಿ ಪ್ರಧಾನಿ ದೇವೇಗೌಡರನ್ನ ಹಾಗೂ ಮಗ ನಿಖಿಲನನ್ನ ಗೆಲ್ಲಿಸಿಕೊಳ್ಳಲು ಆಗದ ಕುಮಾರಸ್ವಾಮಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸುತ್ತೇವೆ ಅಂತಾ ಹೇಳಿದ್ದಾರೆ. ಅವರಿಗೆ ನೊಬೆಲ್ ಪ್ರಶಸ್ತಿ ಕೊಡಬೇಕು ಅಂತಾ ಕಾಲೆಳೆದ್ರು.

ಮತ್ತೊಬ್ಬ ಮಹಾಪುರುಷ ಬೈ ಎಲೆಕ್ಷನ್ ಬಳಿಕ ಸರ್ಕಾರ ಬೀಳುತ್ತೆ ಎಂದು ಹೇಳಿದ್ದಾರೆ. ನಾನೇ ಸಿಎಂ ಅನ್ನುತ್ತಿದ್ದವರು ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಗೆ 78 ಸ್ಥಾನ ತಂದು ಕೊಟ್ರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೆಸರು ಹೇಳದೆ ಅವರ ವಿರುದ್ಧ ವಾಗ್ದಾಳಿ ನಡೆಸಿದ್ರು.




Leave a Reply

Your email address will not be published. Required fields are marked *

error: Content is protected !!