ಮಗನ ನಾಮಕರಣ ಹೊತ್ತಿನಲ್ಲೇ ತಂದೆಯ ಸಾವು

241

ಪ್ರಜಾಸ್ತ್ರ ಸುದ್ದಿ

ಕಲಬುರಗಿ: ನಿಜಕ್ಕೂ ಇದೊಂದು ಹೃದಯವಿದ್ರಾವಕ ಘಟನೆಯಾಗಿದೆ. ಮಗನ ನಾಮಕರಣಕ್ಕೆ ಒಂದು ದಿನ ಇರುವಾಗಲೇ ತಂದೆ ಸಾವಿನ ಮನೆ ಸೇರಿದ್ದಾರೆ. ಕೆಎಸ್ಆರ್ ಟಿಸಿ ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜೇವರ್ಗಿ ಪಟ್ಟಣದ ಶಿಕ್ಷಕರ ಕಾಲೋನಿ ಹತ್ತಿರ ಸಂಭವಿಸಿದೆ.

ಬಸಲಿಂಗಪ್ಪ(28) ಹಾಗೂ ಮಹಾಂತಯ್ಯ(60) ಮೃತ ದುರ್ದೈವಿಗಳು. ಹರನೂರಿನಲ್ಲಿ ನಾಳೆ ಮಗನ ನಾಮನಕರಣ ನಡೆಯುತ್ತಿದ್ದ ಕಾರಣಕ್ಕೆ, ಜೇವರ್ಗಿಯಿಂದ ಹರನೂರಿಗೆ ಬೈಕ್ ನಲ್ಲಿ ಹೋಗುತ್ತಿದ್ದಾಗ ವಿಜಯಪುರದಿಂದ ಕಲಬುರಗಿ ಕಡೆ ಹೋಗುತ್ತಿದ್ದ ಬಸ್ ನಡುವೆ ಅಪಘಾತವಾಗಿ ದುರಂತ ನಡೆದಿದೆ. ಬಸ್ ಚಾಲಕ ಪರಾರಿಯಾಗಿದ್ದಾನೆ.




Leave a Reply

Your email address will not be published. Required fields are marked *

error: Content is protected !!