3ನೇ ದಿನಕ್ಕೆ ಕಾಲಿಟ್ಟ ಮುಷ್ಕರ: ಬಸ್ ಪಾಸ್ ಇದ್ದೂ ವ್ಯರ್ಥ

300

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸಾರಿಗೆ ನೌಕರರ ಮುಷ್ಕರ 3ನೇ ದಿನಕ್ಕೆ ಕಾಲಿಟ್ಟಿದೆ. ಇದ್ರಿಂದಾಗಿ ರಾಜ್ಯದಲ್ಲಿ ಸರ್ಕಾರಿ ಬಸ್ ಗಳ ಓಡಾಟ ಸಂಪೂರ್ಣವಾಗಿ ಸ್ತಬ್ಧವಾಗಿದೆ. ಇದ್ರಿಂದಾಗಿ ಸಾರ್ವಜನಿಕರು ಪರದಾಟ ನಡೆಸಿದ್ದಾರೆ.

ತಮ್ಮ ಬೇಡಿಕೆ ಈಡೇರುವ ತನಕ ಹೋರಾಟದಿಂದ ಹಿಂದೆ ಸರಿಯುವುದಿಲ್ಲವೆಂದು ಎಚ್ಚರಿಕೆ ನೀಡಿದ್ದಾರೆ. ಇದರ ನಡುವೆ ಭಾನುವಾರ ಬೆಳಗ್ಗೆ 11 ಗಂಟೆಗೆ ಟ್ರೆಂಡ್ ಯೂನಿಯನ್ ಜೊತೆಗೆ ಸಭೆ ನಡೆಸಲಾಗುವುದು ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.

ಇನ್ನು ಬಸ್ ಪಾಸ್ ಹೊಂದಿರುವವರ ಪರಿಸ್ಥಿತಿ ಹೈರಾಣಾಗಿದೆ. ಸಾವಿರಾರು ರೂಪಾಯಿ ಬಸ್ ಪಾಸ್ ಗೆ ನೀಡಿರ್ತಾರೆ. ಆ ಕಡೆ ಕೆಲಸ ಬಿಟ್ರೆ ಸಂಬಳ ಬರಲ್ಲ. ಈ ಕಡೆ ಕೆಲಸಕ್ಕೆ ಹೋಗಬೇಕು ಅಂದ್ರೆ ಬಸ್ ಇಲ್ಲ. ಹೀಗಾಗಿ ಪರ ಊರುಗಳಿಗೆ ನಿತ್ಯ ಕೆಲಸಕ್ಕೆ ಹೋಗುವವರ ಸ್ಥಿತಿ ಅಯೋಮಯವಾಗಿದೆ. ಸಿಟಿಯಲ್ಲಿ ಕೆಲಸಕ್ಕೆ ಹೋಗುವವರು ಆಟೋಗಳಿಗೆ ದುಪ್ಪಟ್ಟು ಹಣ ಕೊಟ್ಟು ಹೋಗುವುದಕ್ಕೂ ಕಷ್ಟವಾಗ್ತಿದ್ದು, ಸರ್ಕಾರದ ಬೇಜಾವಾಬ್ದಾರಿ ತನಕ್ಕ ಸಾರ್ವಜನಿಕರು ನೋವು ಅನುಭವಿಸ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!