‘ಅವರು ಬದುಕಿದ್ದಾಗ ಮಾತ್ನಾಡಿದ್ರೆ ಗಂಡಸ್ತನ ಇರುತಿತ್ತು’

274

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ತೆಲುಗು ನಟ ವಿಜಯ ರಂಗರಾಜು ಎಂಬಾತ ಡಾ.ವಿಷ್ಣುವರ್ಧನ ಅವರ ಬಗ್ಗೆ ಕೆಟ್ಟದಾಗಿ ಮಾತ್ನಾಡಿದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಅಭಿಮಾನಿಗಳು ಸೇರಿದಂತೆ ಕನ್ನಡ ಚಿತ್ರರಂಗದ ಸ್ಟಾರ್ ನಟರು ತಿರುಗಿ ಬಿದ್ದಿದ್ದಾರೆ. ಇದೀಗ ಕಿಚ್ಚ ಸುದೀಪ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ಆ ವ್ಯಕ್ತಿ ಬದುಕಿದ್ದಾಗ ಮಾತ್ನಾಡಿದ್ರೆ ಆಗ ಒಂಚೂರು ಗಂಡಸ್ತನ ಇರುತ್ತೆ ಅನ್ನೋದು ನನ್ನ ನಂಬಿಕೆ ಎಂದು ವಿಡಿಯೋ ಮೂಲಕ ಖಡಕ್ ಆಗಿ ಎಚ್ಚರಿಕೆ ಕೊಟ್ಟಿದ್ದಾರೆ. ವಾರ್ನಿಂಗ್ ಕೊಟ್ಟೆ ಅನ್ನೋ ಮಾತೆಲ್ಲ ಆಡಬೇಡಿ. ಅವರು ಇಲ್ಲದೆ ಇರಬಹುದು. ನಾವೆಲ್ಲ ಇದ್ದೇವೆ. ಇಲ್ಲಿ ಯಾರೂ ಕೈಯಲ್ಲಿ ಆಗದೆ ಇರುವವರಿಲ್ಲ. ವಿಷ್ಣು ಸರ್ ಇಲ್ಲದೆ ಇರಬಹುದು. ಕೋಟಿ ಕೋಟಿ ಮಕ್ಕಳನ್ನ ಬಿಟ್ಟು ಹೋಗಿದ್ದಾರೆ ಅನ್ನೋ ಮೂಲಕ ವಿಜಯ ರಂಗರಾಜು ಎಂಬಾತನಿಗೆ ಮುಟ್ಟಿ ನೋಡಿಕೊಳ್ಳುವಂತಹ ಮಾತುಗಳಿಂದಲೇ ಏಟು ಕೊಟ್ಟಿದ್ದಾರೆ ನಟ ಕಿಚ್ಚ ಸುದೀಪ.




Leave a Reply

Your email address will not be published. Required fields are marked *

error: Content is protected !!