ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಭಾನುವಾರ ರಾತ್ರಿ ವಿಕಾಸ ಸೌಧದಲ್ಲಿ ನಡೆದ ಸಭೆಯಲ್ಲಿ ಸಾರಿಗೆ ನೌಕರರ ಹಲವು ಬೇಡಿಕೆಗಳನ್ನ ಒಪ್ಪಿಕೊಂಡಿದ್ದು ಬಸ್ ಸಂಚಾರ ಶುರುವಾಗುತ್ತೆ ಎಂದು ಹೇಳಿ, ಫ್ರೀಡಂ ಪಾರ್ಕ್ ಗೆ ಬರುವಷ್ಟರಲ್ಲಿ ಏನಾಗಿದೆ ಗೊತ್ತಿಲ್ಲ. ಸಾರಿಗೆ ನೌಕರರ ಮುಖಂಡರು ಉಲ್ಟಾ ಹೊಡೆದಿದ್ದಾರೆ.
ರಾತ್ರಿಯಿಂದ ಸಭೆ ಮೇಲೆ ಸಭೆಯನ್ನ ಸಚಿವರು ಮಾಡ್ತಿದ್ರೂ ಯಾವುದೇ ಇತ್ಯರ್ಥಕ್ಕೆ ಬರಲು ಆಗಿಲ್ಲ. ಸಂಧಾನ ವಿಫಲವಾಗಿದ್ದು, ಮುಷ್ಕರ 4ನೇ ದಿನಕ್ಕೆ ಕಾಲಿಟ್ಟಿದೆ. ಹೀಗಾಗಿ ಇದೀಗ ರಾಜ್ಯ ಸರ್ಕಾರ ಎಸ್ಮಾ ಜಾರಿಗೆ ಚಿಂತನೆ ನಡೆಸಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.