ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಸಾರಿಗೆ ನೌಕರರ ಮುಷ್ಕರಕ್ಕೆ ಸಂಬಂಧಿಸಿದಂತೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಇನ್ನೇನು ಕೆಲವೇ ಕ್ಷಣಗಳಲ್ಲಿ ಸಿಎಂ ಜೊತೆ ಸಭೆ ನಡೆಸಲಿದ್ದಾರೆ. ಈಗಾಗ್ಲೇ ಸಾಕಷ್ಟು ದಾಖಲೆಗಳನ್ನ ಸಂಗ್ರಹಿಸಿದ್ದು, ಹೋರಾಟದಿಂದ ಆಗ್ತಿರುವ ಸಾಧಕ ಬಾಧಕ ಕುರಿತು ಚರ್ಚಿಸಲಿದ್ದಾರೆ.
ಇದರ ನಡುವೆ ಸಾರಿಗೆ ನೌಕರರ ಮುಷ್ಕರದ ನೇತೃತ್ವವಹಿಸಿಕೊಂಡಿರಿವ ಕೋಡಿಹಳ್ಳಿ ಚಂದ್ರಶೇಖರ ವಿರುದ್ಧ ಜನಾಕ್ರಾಶ ವ್ಯಕ್ತವಾಗಿದೆ. ಇದ್ರಿಂದ ಬೆದರಿಕೆಕೊಂಡ ಕೋಡಿಹಳ್ಳಿ, ಜನರ ಹಿತಾಸಕ್ತಿಯನ್ನ ಗಮನದಲ್ಲಿಟ್ಟಿಕೊಂಡಿದ್ದೇವೆ. ಹೀಗಾಗಿ ಇಂದು ಬೆಳಗ್ಗೆ 11 ಗಂಟೆಗೆ ಮುಷ್ಕರ ಹಿಂಪಡೆಯುತ್ತೇವೆ ಎಂದು ಹೇಳಿದ್ದಾರೆ. ಆದ್ರೆ, ಇದು ಎಷ್ಟು ಸತ್ಯ ಸುಳ್ಳು ಅನ್ನೋದು ಬಸ್ ಗಳು ರೋಡಿಗೆ ಇಳಿದ್ಮೇಲೆ ಗೊತ್ತಾಗಲಿದೆ.