ಪ್ರಜಾಸ್ತ್ರ ಅಪರಾಧ ಸುದ್ದಿ
ವಿಜಯನಗರ: ಕೋರ್ಟ್ ಆವರಣದಲ್ಲೇ ವಕೀಲರೊಬ್ಬರನ್ನ ಶನಿವಾರ ಬೆಳಗ್ಗೆ ಭೀಕರವಾಗಿ ಕೊಲೆ ಮಾಡಲಾಗಿದೆ. ವಕೀಲ ಡಾ.ತಾರಿಹಳ್ಳಿ ವೆಂಕಟೇಶ ಅವರನ್ನ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ಮನೋಜ ಅನ್ನೋ ಯುವಕ ಕರ್ತವ್ಯನಿರತ ವಕೀಲರನ್ನ ಹಾಡುಹಗಲೇ ಕೊಲೆ ಮಾಡಿದ್ದಾನೆ. ಆಸ್ತಿ ವಿವಾದ ಸಂಬಂಧ ಈ ಹತ್ಯೆ ನಡೆದಿದೆ ಎನ್ನಲಾಗ್ತಿದೆ. ಪೊಲೀಸರು ಮನೋಜನನ್ನ ಬಂಧಿಸಿದ್ದಾರೆ.